Sunday, May 15, 2011

ದೇವರು - ೧


ಗಣಪತಿಯಜ್ಜ ಮತ್ತೊಮ್ಮೆ ಗಟ್ಟಿಯಾಗಿ ಹೇಳಿದ."ಇಲ್ಲ ನಮಗೊಂದು ದೇವಸ್ತಾನ ಬೇಕು.ದೇವರಿಲ್ಲದ ಊರು ಗಂಡು ದಿಕ್ಕಿಲ್ಲದ ಮನೆ ಎರೆಡು ಒಳ್ಳೆಯದಕ್ಕಲ್ಲ".ಕಾನು ಮನೆಯ ವೆಂಕಪ್ಪ .,ಆಚೆ ದಿಂಬದ ಸಿದ್ದಜ್ಜ .,ಮೊದಲಮನೆ ಗಿರಿಯವರಿಗೆ ಯಾಕೋ ಇದೆಲ್ಲ ಹಿಡಿಸಲಿಲ್ಲ.ಯಾಕೆ ಈ ಮುದುಕನಿಗೆ ಇಲ್ಲದ ಉಸಾಬರಿ ಅನ್ನುವ ಭಾವ ಒಡೆದು ತೋರುತ್ತಿತ್ತು.ನೂರೆಕೆರೆ ತೋಟದ ಒಡೆಯ ದತ್ತುವಿಗೂ ಇದರ ಪರ ಒಲವಿದ್ದುದರಿಂದ ಎದುರಾಡುವ ಧೈರ್ಯ ಯಾರೂ ಮಾಡಲಿಲ್ಲ.ಉಸಿರು ಮಗಚುವ ಮೌನ ಕಂಡು ದತ್ತುವೆ ನಿರ್ಧರಿಸಿದ."ಗಪ್ಪಜ್ಜಾ ಸದ್ಯಕ್ಕೆ ಇಷ್ಟಿರ್ಲಿ.,ಎಲ್ಲರಿಗೂ ನಾಲ್ಕ್ ದಿನ ಯೋಚನೆ ಮಾಡಕ್ಕೆ ಟೈಮ್ ಬೇಡದಾ...".ಮೀಟಿಂಗ್ ಮುಗಿಸಿದ ಹಾಗೆ ಅನಿಸಿದ್ದರಿಂದ ಗಪ್ಪಜ್ಜ ಮನೆ ಕಡೆ ಹೊರಟ.
                                                          ------------------------------------------------------------------
..ಊರು ಅಂದಕೂಡಲೇ ಮನಸ್ಸಿಗೆ ಬರುವಂತಹದ್ದೆ ಊರು ಅದೂ ಕೂಡ.ಮಲೆನಾಡಿನದು.ಬರಾಬ್ಬರಿ ಮಳೆ ಬರುವ ಊರು ನಮ್ದು ಅಂತೆಲ್ಲ ನಾವು   ಬಯಲುಸೀಮೆಗೆ ಹೋದಾಗ ಕತೆ ಕೊಚ್ಚಿ ಮನೆಗೆ ಬಂದದ್ದು ಉಂಟು. ಈಗೀಗ ಆಚೆ ಮನೆಯ  ಗಣಪತಿಯಜ್ಜ ಇವೆಲ್ಲ  ಎಂತ ಮಳೆ .,ಕಲಿ ಎರೆಡನೆ ಕಾಲು ಇಟ್ಟಾ ಅಂತ ಹಲುಬುವುದನ್ನ ಕೇಳಿ ನಕ್ಕಿದ್ದ ನೆನಪು.ಎಂದೂ ನಗೆ ಮಾಸದ ಕವಳದ ಬಾಯಿಗಳ ಕಲರವ .,ಕೆಂಪು ಅಡಕೆಯ ತೊಗರಿನದೆ ಬಣ್ಣದ ಕೆನ್ನೆಯ ಹೆಂಗಳೆಯರ ನಗು.ಎಲ್ಲ ಮೀರುವ ಅವಕಾಶವಿದ್ದೋ ಹಲಸಿನಕಾಯಿಯ ಹಪ್ಪಳ ತಟ್ಟುತ್ತಲೇ ಸಂತೃಪ್ತವಾಗುವ ಕೈಗಳು    .ಇವನ್ನೆಲ್ಲ ಒಡಲೊಳಗೆ ಇಟ್ಟುಕೊಂಡಿದ್ದಷ್ಟೇ ವ್ಯತ್ಯಾಸ.

ದಾಸವಾಳ ,ಸಂಪಿಗೆ .,ಕೌಳಿ ನೇರಳೆ ಮಾವು ಹಲಗೆ ಮುಳ್ಳಣ್ಣು ಲೆಕ್ಕವಿಲ್ಲದ ಹೆಸರಿಟ್ಟುಕೊಂಡ ಊರಿಗೆ ತಾನೊಬ್ಬನಿಲ್ಲವೆಂದರೆ ಹೇಗೆಂದು ದೇವರಿಗೂ ಅನಿಸಿತ್ತೇನೋ.ಊರ ಹಿರಿಯ ಗಣಪತಿಯಜ್ಜ ದೇವರಿಗೆ ಸ್ವಾಗತ ಕೋರಲು ತಯಾರಾಗಿದ್ದ ಒಟ್ಟಿನಲ್ಲಿ.

1 comment:

  1. ಚ೦ದ ಇದೆ ಸರ್ ನಿಮ್ಮ ಬರೆದಾಟ...! ಇತಿ ಪ್ರೀತಿಯ, ಗ೦ಗಣ್ಣ.

    ReplyDelete