Wednesday, August 8, 2012

ಸಿಡಿಲು !!

ಸಿಡಿಲು !!...ಅದೊಂದು ಅದ್ಬುತ ಕೌತುಕಗಳ ಸಂಗಮ.ಶಕ್ತಿಯ ಸಂಕೇತ.ಪ್ರಕೃತಿಯ ರುದ್ರರಮಣೀಯತೆಯ ಚುಂಚು.ಅದು ಇಂದ್ರನ ವಜ್ರಾಯುಧ ಎಂದೂ ,...ಅಥವಾ ಅರ್ಜುನನಿಗೆ ಹೆದರುತ್ತದೆಂದೂ ಕೇಳಿದ್ದೇವೆ.
ಆದರೆ ಸಿಡಿಲಿನ ಉತ್ಪತ್ತಿ ಹೇಗೆ.ಸ್ವಲ್ಪ ವಿಜ್ಞಾನಿಕ ಪ್ರಶ್ನೆ.ಸಣ್ಣವನಿದ್ದಾಗ ಮೋಡ ಮೋಡಕ್ಕೆ ಡಿಕ್ಕಿ ಹೊಡೆದು ಸಿಡಿಲು ಬರುತ್ತದೆಂದು ನಂಬಿದ್ದೆ.ಆದರೆ ಮೋಡ ಕಲ್ಲಿನ ಹಾಗೆ ಗಟ್ಟಿ ಇರುವುದೇ ಇಲ್ಲವಲ್ಲ.ಇನ್ನೆಲ್ಲಿ ಡಿಕ್ಕಿಯ ಪ್ರಶ್ನೆ.ಸರಿ ಹಾಗಾದರೆ ಇನ್ನು ಹೇಗೆ?.ಮೋಡ ಅಂದರೆ ಅದು ತುಂಬಾ ಸಾಂದ್ರವಗಿರುವ ನೀರಿನ ಕಣಗಳು.ಆ ಸಾಂದ್ರತೆಯಲ್ಲಿ ಧನಾತ್ಮಕ ಅಣುಗಳು ಮೋಡದ ಮೆಲ್ಪದರದಲ್ಲೂ ಹಾಗೆ ಋಣಾತ್ಮಕ ಅಣುಗಳು (protons and electrons respectively) ಶೇಖರವಾಗುತ್ತದೆ.ಮೇಲೆ ಹಾಗುಗುತ್ತಿದ್ದ ಹಾಗೇ ಇತ್ತ ಭೂಮಿಯ ಮೇಲ್ಪದರಲ್ಲಿರುವ ಎಲ್ಲಾ ಧನಾತ್ಮಕ ಅಣುಗಳು ಒಂದೆಡೆ ಕೂಡಿಕೊಳ್ಳುತ್ತವೆ.(ಪ್ಲಸ್ಸು ಮೈನುಸ್ಸ್ ಕಡೆಗೆ ಆಕರ್ಷಿತಗೊಳೋದು ಪ್ರಕೃತಿಯ ಅಂತ್ಯಂತ ಸಹಜಾತಿಸಹಜ ಗುಣ).ಯಾವಾಗ ಧನಾತ್ಮಕ ಅಣುಗಳ ಸಾಂದ್ರತೆ ಮತ್ತು ಋಣಾತ್ಮಕ ಅಣುಗಳ ಆಕರ್ಷಣೆ ಭೂಮಿಯ ಗುರುತ್ವಾಕರ್ಷಣ ಬಲವನ್ನ ಮೀರುತ್ತದೋ ಆಗ ಒಂದು ಸುಲಭವೆನ್ನಿಸುವ ವಾಹಕದ ಮೂಲಕ ವಿದ್ಯುತ್ನ ರೂಪದಲ್ಲಿ ಆಕಾಶದೆಡೆಗೆ ಹರಿಯುತ್ತದೆ.(ಆಕಾಶದಿಂದ ಭೂಮಿಗೆ ಸಿಡಿಲು ಹೊಡೆಯುವುದಿಲ್ಲ).ಅದೇ ಸಿಡಿಲು.THUNDER

ಪ್ಲಸ್ಸು ಮೈನುಸ್ಸ್ ಕಡೆಗೆ ಆಕರ್ಷಿತವಾದಗೆಲ್ಲಾ thunderstorm ಗಳು ಇರೋದೆ ಅಲ್ವ

Sunday, August 5, 2012

ಮೊಟ್ಟೆಯಂತೆ ನಾವು

ಈ ಮೊಟ್ಟೆ ಇದಿಯಲ್ಲ.ಅದರ ಹೊರಕವಚ ಸುಣ್ಣದಿಂದ ಮಾಡಿದ್ದು. ಸುಣ್ಣ ಅಂದ್ರೆ ನಾವೆಲ್ಲ ಏನ್ ಅನ್ಕೊತಿವಿ?? ಗೋಡೆಗೆ ಹೊಡೆಯೋ ಸುಣ್ಣ ಅಥವಾ ಅದೇ ತರದ್ದು ಇನ್ನೆಷ್ಟು ಗಟ್ಟಿ ಇದ್ದೀತು ಅಂತ ಆಲ್ವಾ?
ಅದನ್ನ ನಾವು ಓಡಿಬೇಕಾದ್ರೆ ಅಡ್ಡ ಹಿಡ್ಕೊಂಡು ಓಡಿತಿವಿ.next ಟೈಮ್ ಅದನ್ನ ಉದ್ದ ಹಿಡ್ಕೊಂಡು ಮೊಟ್ಟೆಯ exact ನೆತ್ತಿಯ ಮೇಲೆ ಹೊಡೆದು ನೋಡಿ.ಮನುಷ್ಯನಿಗೇನು., ಆನೆಗೂ ಅದನ್ನ ಒಡೆಯಕ್ಕೆ ಆಗಲ್ವಂತೆ.

ಅಣ್ಣ ಹಜಾರೆ ಕುತ್ಕೊಂಡು ಜಪ್ಪಿದರೂ ಅಲ್ಲಾಡದ ನಮ್ಮ ಕೇಂದ್ರ ಸರ್ಕಾರದ ತಲೆ ಮುಂದೆ ಇದೆಲ್ಲ ಏನು ಅಲ್ವ ?? ಇರಲಿ.

ನಾವು ನಮ್ಮ ಜೀವನದ ಒಂದಲ್ಲ ಒಂದು ಭಾಗದಲ್ಲಿ , ನಂಗೆ ಅಷ್ಟೊಂದು ಸಾಮರ್ಥ್ಯ ಇಲ್ಲ ಅಂತ ಕೈ ಚೆಲ್ಲಿ ಕುತ್ಕೊಬಿಡ್ತೀವಿ ಅಲ್ವ. ನಾನು  ಅಷ್ಟು ದೊಡ್ಡ ಕಂಪನಿಯ ಸಂದರ್ಶನ ಎದುರಿಸಲಾರೆ ಅಂತಾನೋ , ಇಲ್ಲ ಆ ಪ್ರೇಮ ವೈಫಲ್ಯದಿಂದ ಹೊರಬರಲಾರೆ ಅಂತಾನೋ , ಒಟ್ಟಾರೆ ನಮ್ಮ ಆತ್ಮ ವಿಶ್ವಾಸದ ಪಿಲ್ಲರ್ಗಳು ಅಲ್ಲಾಡಿಬಿಟ್ಟಿರುತ್ತವೆ.ನಾವು ಕೂಡ ಮೊಟ್ಟೆಯ ಹೊರಕವಚದಂತೆ. ಸರಿಯಾದ ತರದಲ್ಲಿ ಸಮಸ್ಯೆಗಳನ್ನ ಎದುರಿಸಿದರೆ , ಎದ್ದು ನಿಂತರೆ ಆ ಎಲ್ಲ ಸೋಲಿಂದ ಹೊರಬರಬಹುದು.ಮಲಗಿದರೆ ಜಗತ್ತು ನಮ್ಮನ್ನ ಅಮ್ಲೆಟ್ ಮಾಡಿ ಬಿಡುತ್ತದೆ. ನಿಮ್ಮ ತಾಕತ್ತಿನ ಪರಿಚಯ ನಿಮಗಿರಲಿ.


ವಿಷಕನ್ಯೆ

ವಿಷಕನ್ಯೆ ಅಂತ ಬರತ್ತಲ ಭಾರತದ ಪುರಾಣ ಪುಣ್ಯ ಕಥೆಗಳಲ್ಲಿ .ಆ ವಿಷಕನ್ಯೆ ನೋಡೋದಿಕ್ಕೆ ಅದ್ಭುತವಾಗಿರ್ತಿದ್ಳಂತೆ ಅಥವಾ ಅದ್ಭುತವಗಿರೋರನ್ನೇ ವಿಷಕನ್ಯೆ ಮಾಡ್ತಿದ್ರು.ಏನು ಅಂತಂದ್ರೆ ರಾಜ ಮಹಾರಾಜರು ತಮ್ಮ ಎದುರಾಳಿಗಳನ್ನ ಕೊಲ್ಲೋಕೆ ಇವರನ್ನ ಕಳಿಸ್ತಿದ್ರು.ಇವರ ಜೊತೆಗೆ ಏನಾದರೂ ವಿರೋಧಿ ದೇಶದ ರಾಜ ಮಲಗಿದ ಅಂತಂದ್ರೆ ಆತ ಕತೆ ಮುಗಿಯಿತು.ಪ್ರಣಯದಾಟ ಮುಗಿಯುವ ಮುಂಚೆಯೇ ಈತನ ಇಹಲೋಕದಾಟ ಕೊನೆಗೊಂಡಿರುತ್ತಿತ್ತು.

ಸರಿ ಇವರು ವಿಷಕನ್ಯೆ ಹೇಗಾಗ್ತಿದ್ರು ಹಾಗಾದ್ರೆ. ಒಂದು ಸುಂದರವಾದ ಹೆಣ್ಣು ಹಸುಗೂಸನ್ನ ರಾಜರು ದತ್ತು ತೆಗೆದುಕೊಂಡು ಅವರಿಗೆ ನಿಯಮಿತ ಪ್ರಮಾಣದ ಪಾದಸರಸವನ್ನ ದೇಹಕ್ಕೆ ಕೊಡ್ತಿದ್ರಂತೆ(ಯಾವ ತರ ಅಂತ ಗೊತ್ತಿಲ್ಲ)( taken on recommendation of medical practitioner).ಅವರ ದೇಹ ಹಾಗಾಗಿ ವಿಷಪೂರಿತವಾಗುತ್ತಿತ್ತು.

ಕೊಲ್ಲೋಕೆ ಮನುಷ್ಯ ಎಂಥೆಂಥಾ ವಿಧಾನಗಳನ್ನ ಹುಡುಕ್ತಿದ್ದ ನೋಡಿ

Friday, August 3, 2012

ವೈದ್ಯೋ: ನಾರಾಯಣೋ ಹರಿ:

ಸಿಡುಬು ಗೊತ್ತಿರಬಹುದಲ್ಲ.ಇವಾಗೇನೂ ಔಷದಿ ಇದೆ ಅದಕ್ಕೆ ಸರಿ.ಆದರೆ ಬಹಳ ಹಿಂದೆ ಅದಕ್ಕೆ ಈ ತರಹದ ಔಷದಿ ಇರಲಿಲ್ಲ.ಅಮ್ಮ ..,,ದೇವಿ ಅಂತೆಲ್ಲ ಹರಕೆ ಹೊತ್ಕೊಂಡೆ ಹರ ಹರ ಅಂದು ಬಿಡೋರು.ಆದರೆ ನಮ್ಮ ವೈದ್ಯಪದ್ದತಿ ನಿಜಕ್ಕೂ ಅದೊಕ್ಕೊಂದು ಔಷದಿ ಹುಡುಕಲು ಒದ್ದಾಡಿತ್ತು.ಎಲ್ಲೂ ಅದರ ಬಗ್ಗೆ ಹೇಳುವುದಿಲ್ಲ ನಮ್ಮ ಪೂರ್ವಗ್ರಹಪೀಡಿತ ಶಿಕ್ಷಣ ವ್ಯವಸ್ಥೆ ಅಷ್ಟೇ.

ಸಿಡುಬು ಬಂದಿರತ್ತಲ್ಲ ಆ ಮನುಷ್ಯನ ಮೇಲೆ ಎದ್ದಿರತ್ತಲ್ಲ ಕೀವು ತುಂಬಿದ ಗುಳ್ಳೆಗಳು.., ಅದರಿಂದ ಕೀವು ತೆಗೆದು ಅದನ್ನ ಒಣಗಿಸಿ ಪುಡಿ ಮಾಡಿ ಅದನ್ನ ವೈದ್ಯರು ಸಂರಕ್ಷಿಸಿ ಇಟ್ಟುಕೊಂಡು ಹೊಸದಾಗಿ ಸಿಡುಬು ಬಂದ ವ್ಯಕ್ತಿಗೆ ಮೂಗಿನ ಮೂಲಕ ಊದುತ್ತಿದ್ದರಂತೆ.ಅದು ಪರಿಣಾಮಕಾರಿಯೂ ಆಗಿತ್ತೆಂದು ಉಲ್ಲೇಖವಿದೆ.

ವೈದ್ಯೋ: ನಾರಾಯಣೋ ಹರಿ: ಅಂತ ಯಾಕಂತಾರೆ ಅಂತ ಇವಾಗ ಗೂತ್ತಾಗ್ತಿದೆ ಅಲ್ವ ???

ಪಾರ್ಲಿಮೆಂಟ್!!

ಸಿಂಹಗಳಿರತ್ತಲ್ವ ಅವಕ್ಕೆ ಇಂಗ್ಲಿಷ್ನಲ್ಲಿ lions ಅಂತಾರೆ ಗೊತ್ತಲ್ಲ.ಅದೇ ಸಿಂಹಗಳ ಗುಂಪಿಗೆ ಏನಂತಾರೆ ಗೊತ್ತ "pride" ಅಂತಾರೆ.(pride of lions)

ಅದೇ ರೀತಿ ಗೂಬೆಗಳಿಗೆ ಇಂಗ್ಲಿಷ್ನಲ್ಲಿ owl ಅಂತಾರೆ ಅಲ್ವ. ಈ group of owl ಗೆ ಏನಂತಾರೆ ಗೊತ್ತ ಇಂಗ್ಲಿಷ್ನಲ್ಲಿ?????
.
.
.
.
.
.
.
.
"parliment"
doubt ಇದ್ರೆ google ಮಾಡಿ ನೋಡಿ
ಬ್ರಿಟಿಷರು ಕೊಟ್ಟು ಹೋದ ಉಡುಗೊರೆಗಳಲ್ಲಿ ಇದೂ ಒಂದು.