Sunday, May 29, 2011

ಹೀಗೊಂದು ಕನ್ನಡಿ ಕಥಾನಕ

ಅದೊಂದು ಚಂದದ ಕನ್ನಡಿ.ಮೂಲೆಗಳೇ ಇಲ್ಲದ ನವಿಲಿನ ಗರಿಯ ರೂಪುಗಳುಳ್ಳ ಮೇಲ್ಪದರದಲ್ಲಿ ಅನ್ಕುಡೊಂಕಿಲ್ಲದ ಎಲ್ಲರೂ ಇಷ್ಟ ಪಡುತ್ತಿದ್ದ ಕನ್ನಡಿ.ಕನ್ನಡಿಗೆಲ್ಲ ಇರುವ ಮತ್ತೊಂದು ವಿಶೇಷತೆ ಅಂದ್ರೆ ಅದು ಹಿಂದೆ ಮರೆಸಿ ಮುಂದೆ ತೋರಿಸುತ್ತದೆ.ಎಲ್ಲ ಜನರು ಬಯಸುವಂತೆ.ಒಳಗೇನು ಹೇಳುವದರಕ್ಕಿಂತ ಹೊರಗೆ ಏನು ಹೇಳುವಂತೆ.ಮುಖವಾಡದ ಅಂತ್ಯಂತ ಸುಂದರ ಮೂರ್ತರೂಪ ,ವಿಶೇಷ ಸೃಷ್ಟಿ ಕನ್ನಡಿ. ಒಳಗೆ ಏನೂ ಹೊರಗೆ ಮತ್ತೊಂದೇನೂ.

ಪಾಪ ನಮ್ಮ ಈ ಕಥೆಯ ಕನ್ನಡಿಗೆ ಅವೆಲ್ಲದರ ಜೊತೆ ಮತ್ತೊಂದು ಶಕ್ತಿ  ಇತ್ತು., ಎದುರಿಗೆ ಇದ್ದಿದ್ದರ ಬಿಂಬ ಚನ್ನಾಗಿತ್ತೋ ಇಲ್ಲವೂ ಪ್ರತಿಬಿಂಬ ಸುಂದರವಾಗಿರುತ್ತಿತ್ತು.ಚಂದಾಮಮನ ಕತೆಯಲ್ಲಿ ಬರುವ ಮಾಯಾ ದರ್ಪಣದ ತರಹ.ಗಜಾಗಮಿನಿಯನ್ನು ಹಂಸಗಮನೆಯನ್ನಾಗಿಯೂ .,ಅಷ್ಟಾವಕ್ರನನ್ನು ಸ್ಪುರದ್ರೂಪಿಯನ್ನಾಗಿಯೂ ತೋರಿಸಬಲ್ಲ ಅದ್ಬುತ ಕಲೆ ಇತ್ತು.ಸಹಜವಾಗಿ ಎಲ್ಲರಿಗೂ ಪ್ರಿಯವಾಗಬಲ್ಲ ಗುಣ.ಎಲ್ಲರು ಬಂದು ಪ್ರತಿಬಿಂಬವ ನೋಡಿ ಖುಷಿ ಪಡುವವರೆ.

ಕನ್ನಡಿಯ ಮನಸಿನ ಒಳಗಿನ ತಲ್ಲಣವ ಅರ್ತ ಮಾಡಿಕೊಳ್ಳುವ ಗೂಜಿಗ್ಯಾರೂ ಹೋಗುತ್ತಿರಲಿಲ್ಲ.ಕನ್ನಡಿಗ್ಯಾರು ಕನ್ನಡಿ ಹಿಡಿದಿರಲಿಲ್ಲ.ಅದೊಂದು ಕಾಳ ರಾತ್ರಿ.ಕಾಕೋಳು ರಾಮಯ್ಯನ ಕಾದಂಬರಿಯಲ್ಲಿ ಬರುವಂತಹದ್ದು.ಕನ್ನಡಿ ತನ್ನೊಳಗಿನ ಬವಣೆಗಳ ಭಾವನೆಗಳ  ಎಲ್ಲ  ಹೊರಹಾಕುವ ನಿರ್ಧಾರದೊಂದಿಗೆ ರೂಪ., ಗುಣಗಳ ಬದಲು ಮಾಡಿಕೊಂಡು ಬೆತ್ತಲಾಗಿತ್ತು.ಜಗತ್ತನ್ನ ಬೆತ್ತಲು ಮಾಡುವ ಹಂಬಲದೊಂದಿಗೆ.

ಮರುದಿನ ಗಜಗಮನೆ  ಗಜಗಮನೆಯಾಗೆ ಇದ್ದಳು.ಮತ್ತೆ ಅಷ್ಟಾವಕ್ರಾ ಅಷ್ಟವಕ್ರನಾಗೆ .ನಿಜವ ಅರಗಿಸಿಕೊಳ್ಳುವ ., ಹೊಟ್ಟೆಗಿಳಿಸಿ ಭುಜಿಸಿಕೊಳ್ಳುವ ಮನವಾಗಲಿಲ್ಲ.ಕಲ್ಲು ಹೊಡೆದರು .ಕನ್ನಡಿಯ ರೂಪ ಕಳಚಿಕೊಳ್ಳುವ ಹಂಬಲಕ್ಕೂ ಸೇರಿಸಿ . ಚೂರಾಯಿತು.ಕನ್ನಡಿಯ ಅಳುವ ಕಾಣುವ ಕನ್ನಡಕ ಯಾರಲ್ಲೂ ಇರಲಿಲ್ಲ.

"ನಮ್ಮ ಕನ್ನಡಿ ಹೀಗೆ ಅಂತ ಗೊತ್ತಿರಲಿಲ್ಲ"
"ಕನ್ನಡಿಯ ಒಳಗೆ ಇನ್ನೆಷ್ಟು ಬಣ್ಣವೋ"
"ಈ ಕನ್ನಡಿ ಸರಿ ಇಲ್ಲವೆಂದು ಕಾಣಲೇ ಇಲ್ಲ . ಛೆ"

ಆಳಿಗೊಂದು ಕಲ್ಲು .,.,ಅವಕಾಶ ಬಿಟ್ಟಾರೆಯೇ??.ಕನ್ನಡಿಯ ಕಲ್ಲೆದೆ ಒಡೆಯಿತು.ಬಿಂಬಗಳು ಮುಸುಕಾಗತೊಡಗಿದವು.ಕನ್ನಡಿಯಿಂದ ಕುಶಿ ಪಡೆದವರ ಕವಾಟಗಳು ಬದಲಾಗಲಿಲ್ಲ.ಒಬ್ಬ ಸಹೃದಯಿ ಬಂದ ಎಲ್ಲಿನ್ದಾನೋ.ಮರುಭೂಮಿಯಲ್ಲಿ ಅಪರೂಪಕ್ಕೆ ಸಿಗುವ ಓಯಸಿಸ್ ತರಹ. ನೋಡಲಾಗಲಿಲ್ಲ ಕನ್ನಡಿಯ ಕಣ್ಣಿರ.ತೇಪೆ ಹಚ್ಚಿದ.ಅಂಟಿಸಿದ.ಒಂದಿಷ್ಟು ಮೂಲೆಗಳೊಂದಿಗೆ ಮತ್ತೆ ಗಾಜು  ಕನ್ನಡಿಯಾಯಿತು.

ಇಂದು ಮನ್ಮಥನ ಪ್ರತಿಬಿಂಬ ಕೂಡ ಅಂಕುಡೊಂಕು.



Thursday, May 26, 2011

ದೇವರು-೩

...ಬರ್ಜರಿ ಚಪ್ಪರ ಕಂಡಿತ್ತು ಕೊಪ್ಪಲು.,ಕೊಪ್ಪಲ ಊರವರ  ಮಾತಿನ ಸಂಬ್ರಮಕ್ಕೆ ಒಣಗಿದ ಸೋಗೆಯ ಗರಿಯ ಸದ್ದು ಕಳೆದು ಹೋಗಿತ್ತು.ಹರಿ ಬಟ್ಟರ  ಮಂತ್ರದೊಂದಿಗೆ ಸಂಗೂಪಾಂಗವಾಗಿ ನಡೆದ ಹೋಮ .,ಆ ಬ್ರಹ್ಮಗಣಪತಿಯ ಬರುವಿಕೆಗೆ ಹೆದ್ದಾರಿಯನ್ನೊದಗಿಸಿತ್ತು.ದೇವರ ಪ್ರಾಣಪ್ರತಿಷ್ಟೆಯೊಂದಿಗೆ ದೇವಸ್ಥಾನ ನೆಲೆ ಊರಿತ್ತು.

"ನಿನ್ನಿಂದಾಗಿ ಊರಿಗೊಂದು ಗುರುತು ಬಂತು ಗಪ್ಪಣ್ಣ....ದೇವರು ತಣ್ಣಗೆ ಇಟ್ಟಿರ್ಲಿ ನಿನ್ನ" ಎಂದು ಹರಸಿ ಹೋಗಿದ್ದಳು ಪುಟ್ಟಜ್ಜಿ.ಅಷ್ಟೆಲ್ಲ ಕಾರ್ಯ ಮಾಡಿದ ಗಪ್ಪಜ್ಜನಿಗೂ ಒಂದು ಶಾಲು ಹೊಡೆಸಿ ಮಾಡಿದ ಕಾರ್ಯಕ್ರಮದಲ್ಲಿ ಹೋಗಳದವರಿಲ್ಲ ಗಪ್ಪಜ್ಜನನ್ನ.
ದೇವರು ಸಂತುಷ್ಟನಾಗಿದ್ದನೂ ಇಲ್ಲವೂ ,.ಗಪ್ಪಜ್ಜನಾಗಿದ್ದ.

ವೆಂಕಣ್ಣ ಹೊಟ್ಟೆಯಲ್ಲೇ ಅವಲಕ್ಕಿ ಕುಟ್ಟಿದ್ದ.

                                         ------------------------------------------------------------------------------------------------------------------------------------------------

ಕಮಿಟಿಯ ಸಭೆಯಲ್ಲಿ ., ಕಾರ್ಯದರ್ಶಿ ವೆಂಕಣ್ಣನ ತಕರಾರು ಸರಿಯಿತ್ತೆಂದು ಎಲ್ಲರಿಗೂ ಅನಿಸಿತ್ತು.ಅಲ್ಲ ಬ್ಯಾಡ ಬ್ಯಾಡ ಅಂದ್ರೂ  ನಾಲ್ಕು ವರ್ಷದ ಹಿಂದೆ  ಕುಣ್ಕಂಡು ಕುಣ್ಕಂಡು ದೇವಸ್ಥಾನ ಕಟ್ಟಿದ..ಇಗ ಕಮಿಟಿ ನಿರ್ಧಾರ ಮಾಡಿರ ವರಾಡ ಕಟ್ಟದಿಲ್ಲೇ ಅಂದ್ರೆ ಹೆಂಗೆ??.,ಒಂದ್ ದೇವಸ್ಥಾನ ನೆಡ್ಸದು ಅಂದ್ರೆ ತಮಾಷೆ ವಿಷಯವಾ..??

ಗಪ್ಪಜ್ಜ ., ನಿದಾನದ ದನಿಯಲ್ಲಿ ನುಡಿದ."ವೆಂಕು, ನಮ್ಮುರಿಂದು ಹೊಳೆ ಆಚೆಗಿನ ಜಮೀನು .,ಸವಳು ನಿಂಗಳಷ್ಟು ಪಸಲು ಬತಲೇ.,ವರಾಡ ಕೊಡದಿಲ್ಲೆ ಅಂತ ಹೇಳದಿಲ್ಲೆ., ನ್ಯಾಯಯುತವಾದ ವರಾಡ  ಹಾಕು"

"ಸುಮ್ಮನ್ಗಿರಾ ., ನೀ ಕೃಷಿ ಮಾಡದೇ ಇದ್ದದ್ದಕ್ಕೆ ., ಇಲ್ದೆ ಇರ ಸಬೂಬು ಹೇಳಡ"

"ನೋಡು ., ಇದೆ ವರಾಡ ಆದ್ರೆ ನಂಗೆ ಕೊಡದು ಕಷ್ಟ., ಧರ್ಮ ಹೇಳಿ ಬನ್ನಿ ., ನೋಡಿ ಮಾಡಿ ಕೊಡ್ತಿ"

ಮೀಟಿಂಗ್ ಮುಗ್ದಿತ್ತು.ಹೆಜ್ಜೆಗಳು ಭಾರವಾಗಿತ್ತು.
                                                ------------------------------------------------------------------------------------------------------------------------------------

ಮರುದಿನ ಊರಿನ ಪಂಚಾಯ್ತೀಗೆ ನಿರ್ದಾರ ,ಗಪ್ಪಜ್ಜನ ಕಿವಿಗೆ ಬಿದ್ದಿತ್ತು., 'ವರಾಡದ ವಿಷಯವಾಗಿ ಗಪ್ಪಜ್ಜನ ಮನೆಯನ್ನ ಬಹಿಷ್ಕಾರ ಮಾಡಕ್ಕು'

ದೇವರು ಕೊಪ್ಪಲಿನಿಂದ ಹೆಜ್ಜೆ ಆಚೆ ಇಟ್ಟಿದ್ದ ಅವತ್ತು ಸಂಜೆ                             

Wednesday, May 18, 2011

ಒಂದಿಷ್ಟು ಅಸ್ಪಷ್ಟ ಪದಗಳು

ಮನಸ ಹಗೇವಿನಲಿ ಅಡ ಮಾಡಿ
ಕುದಿಯುತಿಹ ನೋವು
ಬೆಂದ ಅಡಕೆಯ ಕಣ್ಣು ಬಿಟ್ಟಂತೆ
ಕಳಚಿಟ್ಟು ಹೋದ ನೆನಪು

ಗಿಡ ಮಾಡಿ ನೆರಳಿತ್ತು,ಬಸಿರಂತೆ
ಕಾಪಿಟ್ಟು,ಸಿಂಗಾರ ಶೃಂಗಾರ ಮಾಡಿ
ನಿಂತಿಹ ಮರದ ಬೇರು ಸತ್ತಿಹ ವಾಸನೆ
ಬದುಕ ಬಲ್ಲದೆ ಜೀವ ಪಸಲ ಹೊತ್ತು

ನೇದಿಟ್ಟ ಹೂವು ತನಗಲ್ಲವೆಂದು
ಸ್ಪರ್ಶ ಪ್ರೀತಿಯ ಸಾಂದ್ರಕೆ
ಕ್ಷಯವಿತ್ತೆ ಹೂವಾಡಗಿತ್ತಿ
ಕೈ ಸೋತಿತೇಕೆ ನಿನಗೆ??

ಹಣ್ಣಾದ ಕಾಲಕೆ ಎಲೆ ಉದುರುವಾಗ
ಯಾರು ಹೊಣೆ ಅದಕೆ,ಹಿಡಿಯ
ರಿಯದ ತರುವೋ
ತೂರಿಬಿಟ್ಟ ಗಾಳಿಯೋ,ಕೈಬಿಟ್ಟ ಎಳೆಯೋ??

Tuesday, May 17, 2011

ಒಂದು ಹಾಳು ಯೋಚನೆ

ಈ ಹುಡುಗಿಯರು ಮುಟ್ಟಿದ್ದೆಲ್ಲ ಹಾಳು ಅಲ್ದಾ ?? ಒಂದು ಹುಡುಗಿ ಹಾರ್ಟ್ ಟಚ್ ಮಾಡಿದ ಅಂದ್ರೆ ಹಾರ್ಟ್ ಹಾಳಾಗ್ತು.ಕನಸಲ್ಲಿ ಬಂದ್ರೆ ನಿದ್ದೆ ಹಾಳು.ನೆನಪಿನ ತಡಿಕೆಯ ಪ್ರತಿ ಮಡಿಕೆಯನ್ನ ಮುಟ್ಟಿ ಹೋಗ್ತಾ ಹಾಳಾದ ನೆನಪುಗಳು ಮರೆತೇ ಹೋಗುವುದಿಲ್ಲ.ತಣ್ಣಗೆ ಕೊಟ್ಟ ಮುತ್ತು ಹಾಳಾದ್ದು ವರ್ಷಗಟ್ಟಲೆ ಸುಡುತ್ತದೆ.ಈ ತರದ್ದೊಂದು ಸೃಷ್ಟಿಯ ಬಗ್ಗೆ ಬ್ರಹ್ಮನಿಗೆ ಕಲ್ಪನೆ ಮೂಡಿದ್ದಾದರೂ ಹೇಗೆ?? 


ಮೊನ್ನೆ ಮೊನ್ನೆ ಗಾಡಿ ಮುಟ್ಟಲು ಕೊಟ್ಟೆ.ರಾತ್ರಿ TV ಲಿ ಸುದ್ದಿ..ಹಾಳಾದ್ದ ಪೆಟ್ರೋಲ್ ರೇಟು ೫ ರುಪಾಯೀ ಜಾಸ್ತಿ ಹೇಳಿ.

Sunday, May 15, 2011

ದೇವರು-೨

ಮೂರ್ ಮನೆ ಸುಬ್ಬುವಿನ ಮನೆಯ ಮೆತ್ತಿಯ ಮೇಲ್ಗಡೆ ಇಸ್ಪೀಟ್ ಆಡುತ್ತ ವೆಂಕಪ್ಪ ಮಾತಿಗೆ ಶುರುವಿಟ್ಟ."ಅಲ ಈ ದೇವಸ್ಥಾನ ಅಂದ್ರೆ ಸುಮ್ಮನೆಯಾ.,ಪೂಜೆ ಮಾಡಲೇ ಭಟ್ರು  ಬೇಕು ದೇವಸ್ತಾನಕ್ಕೆ ಅಂತ ಜಾಗ ಬೇಕು.,ನಡೆಸಿಕೊಂಡು ಹೊಪರೊಬ್ರು ಬೇಕು.,ಹರ ಹರ ಅನ್ನೋ ಮುದಕಂಗೆ ತಣ್ಣಗೆ ಇಪ್ಪಲೇ ಅಗದಿಲ್ಲವ, ತಗಳ ಆಟೀನ್ ರಾಣಿ" ರಪ್ಪನೆ ವಾಲೆಯ ವಗದು ಹೇಳಿದ. ರಾಮಾನಂದ  ಕಣ್ಣು ಕಿರಿದು ಮಾಡಿ " ನಂಗ ಬ್ರಾಹ್ಮಣರು.,ದೇವರು ನಮಗೆ ತಾತ್ವಿಕವಾಗಿಯೂ ವ್ಯಾವಹಾರಿಕವಾಗಿಯೂ ಒಂದು ನೆಲೆ ಒದಗಿಸಿ ಕೊಟ್ಟಿದ್ದ.ಜನ ಮರ್ಯಾದೆ ನಮಗೆ ಏನಕ್ಕೆ ಕೊಡ್ತಾ ಇದ್ದ ದುಡ್ಡಿದ್ದು ಹೇಳ ?? .ಇತರ ಜನಾಂಗದ ಮುಂದೆ ಊರಿಗೊಂದು ಮರ್ಯಾದೆ ಇರ್ಲಿ ವೆಂಕ.ದೇವಸ್ಥಾನ ಸಯ್ಯಲ ಕಟ್ಟಿರಾತು.ಒಂಚೂರು ಹೆಚ್ಚುಕಮ್ಮಿ ಆದರೆ ದೇವರೇನು ತಕರಾರು ಮಾಡದಿಲ್ಲೆ".ಸಿದ್ದಜ್ಜನಿಗೆ ಗಿರಿಗೆ ಯಾಕೋ ಮಾತು ಸರಿ ಎನಿಸಿತು.ಅಷ್ಟಕ್ಕೂ ದೀಪಾವಳಿಯಂದು ಇತರ ಜನಾಂಗದವರು ಚೌಡಿಕಟ್ಟೆಯಾ ಮುಂದೆ ತೋರುವ ಭಕ್ತಿಯ ರುದ್ರನರ್ತನ ಎಲ್ಲರ ಕಣ್ಣಿಗೆ ಕಟ್ಟಿದ್ದೆ ಅಲ್ಲವೇ.

ವೆಂಕಪ್ಪನಿಗೆ ಯಾಕೋ ಇರಿಸಿನ್ನು ಹೋದ ಹಾಗೆ ಕಾಣಲಿಲ್ಲ."ಬ್ಯಾಡದೋ ರಾಮಾನಂದ.,ನಿಂಗೆ ಗೊತಾಗ್ತಲ್ಲೇ ಮಾರಾಯ.ಆ ವರಾಡ ದೀಪಕಾಣಿಕೆ ಕಾರ್ತಿಕ ಹೇಳಿ ಸುಮ್ನೆ ದುಡ್ಡು ದಂಡ ಮಾರಾಯ".ಒಳಮನಸ್ಸಿನ ನಿಜ ಬೇಗುದಿಯನ್ನ ತೆರೆದಿಟ್ಟ.ಮರುಕ್ಷಣವೇ ತಾನೆಕೋ ತುಚ್ಛವಾಗಿ ಮಾತನಾಡಿದೆ ಎಂದೆನಿಸಿ ಮಾತು ಕಮಚಿ " ನಿಂಗ ಎಲ್ಲ ಹೆಂಗೆ ಹೇಳ್ತ್ರೋ ಹಂಗೆ" ಎಂದ.ಇಸ್ಪೀಟು ಅಷ್ಟು ಹೊತ್ತಿಗಾಗಲೇ ತನ್ನ ಬಣ್ಣ ಕಳೆದು ಕೊಂಡಿತ್ತೆನಿಸಿತು.ತಣ್ಣಗೆ ಗುಡುಗಿದ ಶಬ್ದ ಕೇಳಿ "ಅರ್ಜುನ ಪಲ್ಗುಣ ಪಾರ್ಥಾ....." ಎಂದೇನೂ ಗುನುಗುತ್ತ ವೆಂಕಪ್ಪ ಎದ್ದು ಹೊರಟ.

                                                                       --------------------------------------------------------------------------------------------------------------------------------

ಪಂಚೆ ನೆಲದವರೆಗೆ ಮುಟ್ಟಿದ್ದರಿಂದ ಕಾಲು ನೆಲದ ಮೇಲೆ ಇತ್ತೋ ಇಲ್ಲವೋ ಗಪ್ಪಜ್ಜನದು ಗೊತ್ತಾಗುತ್ತಿರಲಿಲ್ಲ .ಕೊಟ್ಟಿಗೆಯಲ್ಲಿದ್ದ ಗೌರಿ ಕೂಡ ಪ್ರಸನ್ನವದನಳಾದಂತೆ ಕಾಣುತ್ತಿತ್ತು.ಊರಮನೆ ಮನೆ ಜನರೆಲ್ಲಾ  ಸೇರಿ ದೇವಸ್ಥಾನ ಒಂದು ಆಗಿಬಿಡಲಿ ಹೇಳ ತೀರ್ಮಾನವೂ .,  ರಸ್ತೆ ಮೇಲಿನ .,ದತ್ತುವಿಗೆ ಸೇರಿದ್ದ ಒಂದಿಷ್ಟು ಜಾಗದ ದಾನವೂ ಎಲ್ಲ ಸೇರಿ.ಇನ್ದೆಕೂ ಊರು ನಂದನ ವನದಂತೆ ಕಾಣುತ್ತಿತ್ತು ಗಪ್ಪಜ್ಜನಿಗೆ.ಬೆಂಗಳೂರಿನಲ್ಲಿದ್ದ ರಾಮುವಿನ ಮಗ ಕಾಂತ್ರಾಟುದಾರ ಪ್ರಕಾಶ ತಾ ಕಟ್ಟಿಸಿ ಕೊಡ್ತೆ ದೆವ್ಸ್ತಾನವ ಅಂತೆಲ್ಲ ಹೇಳಿದ್ದು ಕೇಳಿ ಅಬ್ಬ ., ದೇವರು ಬರುವ ಕಾಲಕ್ಕೆ ತಾನೆ ದಾರಿ ಮಾಡಿ ಕೊಳ್ಳುವ  ಅನ್ನುವ ಮಾತು ನಿಜವೆನಿಸಿತ್ತು ಗಪ್ಪಜ್ಜನಿಗೆ.ಇದೊಂದು ಆಗಿಬಿಟ್ಟರೆ ತಣ್ಣಗೆ ಕಣ್ಣುಮುಚ್ಚಲಕ್ಕು ಅಂತ ಹೇಳಿ ಹೆಂಡತಿ ಜಾನಕಿಯ ಹತ್ತಿರ ಬೈಸಿಕೊಂಡೂ  ಆಗಿತ್ತು.೭೦ ರ ಇಳಿವಯಸ್ಸಿನ ಗಪ್ಪಜ್ಜ ಒಂದೇ ದಿನದಲ್ಲಿ ೭೦ ರ ಹರೆಯದ ಗಪ್ಪಜ್ಜನಾಗಿದ್ದ.

ಅಂದಿನಿಂದ ಗಪ್ಪಜ್ಜನಿಗೆ ದೇವಸ್ತಾದ ಕಾಯಕವೇ ಮನೆ ಆಯಿತು.ಏರು ಜವ್ವನದ ಹುಡುಗರು ನಾಚುವಂತೆ ಜಾಗ ಸರಿ ಮಾಡುವ, ದೇವಸ್ತಾನದ ಕಟ್ಟಡ ಕೆಲಸ.ಮೇಲ್ವಿಚಾರಣೆ., ಸರಿಯಾದ ಲೆಕ್ಕ ಪತ್ರ ವಿಚಾರಣೆ ಬಣ್ಣ .,ರೇತಿ ಅಂತ ಹೇಳುತ್ತಲೇ ವರ್ಷವಾಗಿತ್ತು.ಗಪ್ಪಜ್ಜನ ಬೆವರ ಹನಿಯ ಮೂರ್ತ ರೂಪ ಬ್ರಹ್ಮ ಗಣಪತಿ ದೇವಸ್ತಾನ ಊರ ಮದ್ಯದ ಜಾಗದಲ್ಲಿ ನಿಂತಿತ್ತು.

ದೇವರು ಕೊಪ್ಪಲಿಗೆ ಬರಲು ಮಡಿಯುಟ್ಟು ನಿಂತಿದ್ದ.

ದೇವರು - ೧


ಗಣಪತಿಯಜ್ಜ ಮತ್ತೊಮ್ಮೆ ಗಟ್ಟಿಯಾಗಿ ಹೇಳಿದ."ಇಲ್ಲ ನಮಗೊಂದು ದೇವಸ್ತಾನ ಬೇಕು.ದೇವರಿಲ್ಲದ ಊರು ಗಂಡು ದಿಕ್ಕಿಲ್ಲದ ಮನೆ ಎರೆಡು ಒಳ್ಳೆಯದಕ್ಕಲ್ಲ".ಕಾನು ಮನೆಯ ವೆಂಕಪ್ಪ .,ಆಚೆ ದಿಂಬದ ಸಿದ್ದಜ್ಜ .,ಮೊದಲಮನೆ ಗಿರಿಯವರಿಗೆ ಯಾಕೋ ಇದೆಲ್ಲ ಹಿಡಿಸಲಿಲ್ಲ.ಯಾಕೆ ಈ ಮುದುಕನಿಗೆ ಇಲ್ಲದ ಉಸಾಬರಿ ಅನ್ನುವ ಭಾವ ಒಡೆದು ತೋರುತ್ತಿತ್ತು.ನೂರೆಕೆರೆ ತೋಟದ ಒಡೆಯ ದತ್ತುವಿಗೂ ಇದರ ಪರ ಒಲವಿದ್ದುದರಿಂದ ಎದುರಾಡುವ ಧೈರ್ಯ ಯಾರೂ ಮಾಡಲಿಲ್ಲ.ಉಸಿರು ಮಗಚುವ ಮೌನ ಕಂಡು ದತ್ತುವೆ ನಿರ್ಧರಿಸಿದ."ಗಪ್ಪಜ್ಜಾ ಸದ್ಯಕ್ಕೆ ಇಷ್ಟಿರ್ಲಿ.,ಎಲ್ಲರಿಗೂ ನಾಲ್ಕ್ ದಿನ ಯೋಚನೆ ಮಾಡಕ್ಕೆ ಟೈಮ್ ಬೇಡದಾ...".ಮೀಟಿಂಗ್ ಮುಗಿಸಿದ ಹಾಗೆ ಅನಿಸಿದ್ದರಿಂದ ಗಪ್ಪಜ್ಜ ಮನೆ ಕಡೆ ಹೊರಟ.
                                                          ------------------------------------------------------------------
..ಊರು ಅಂದಕೂಡಲೇ ಮನಸ್ಸಿಗೆ ಬರುವಂತಹದ್ದೆ ಊರು ಅದೂ ಕೂಡ.ಮಲೆನಾಡಿನದು.ಬರಾಬ್ಬರಿ ಮಳೆ ಬರುವ ಊರು ನಮ್ದು ಅಂತೆಲ್ಲ ನಾವು   ಬಯಲುಸೀಮೆಗೆ ಹೋದಾಗ ಕತೆ ಕೊಚ್ಚಿ ಮನೆಗೆ ಬಂದದ್ದು ಉಂಟು. ಈಗೀಗ ಆಚೆ ಮನೆಯ  ಗಣಪತಿಯಜ್ಜ ಇವೆಲ್ಲ  ಎಂತ ಮಳೆ .,ಕಲಿ ಎರೆಡನೆ ಕಾಲು ಇಟ್ಟಾ ಅಂತ ಹಲುಬುವುದನ್ನ ಕೇಳಿ ನಕ್ಕಿದ್ದ ನೆನಪು.ಎಂದೂ ನಗೆ ಮಾಸದ ಕವಳದ ಬಾಯಿಗಳ ಕಲರವ .,ಕೆಂಪು ಅಡಕೆಯ ತೊಗರಿನದೆ ಬಣ್ಣದ ಕೆನ್ನೆಯ ಹೆಂಗಳೆಯರ ನಗು.ಎಲ್ಲ ಮೀರುವ ಅವಕಾಶವಿದ್ದೋ ಹಲಸಿನಕಾಯಿಯ ಹಪ್ಪಳ ತಟ್ಟುತ್ತಲೇ ಸಂತೃಪ್ತವಾಗುವ ಕೈಗಳು    .ಇವನ್ನೆಲ್ಲ ಒಡಲೊಳಗೆ ಇಟ್ಟುಕೊಂಡಿದ್ದಷ್ಟೇ ವ್ಯತ್ಯಾಸ.

ದಾಸವಾಳ ,ಸಂಪಿಗೆ .,ಕೌಳಿ ನೇರಳೆ ಮಾವು ಹಲಗೆ ಮುಳ್ಳಣ್ಣು ಲೆಕ್ಕವಿಲ್ಲದ ಹೆಸರಿಟ್ಟುಕೊಂಡ ಊರಿಗೆ ತಾನೊಬ್ಬನಿಲ್ಲವೆಂದರೆ ಹೇಗೆಂದು ದೇವರಿಗೂ ಅನಿಸಿತ್ತೇನೋ.ಊರ ಹಿರಿಯ ಗಣಪತಿಯಜ್ಜ ದೇವರಿಗೆ ಸ್ವಾಗತ ಕೋರಲು ತಯಾರಾಗಿದ್ದ ಒಟ್ಟಿನಲ್ಲಿ.

Saturday, May 14, 2011

....ಮತ್ತು ಪ್ರೀತಿ

ಎನಗೆ ಸಾವಿಲ್ಲವೇ ,ಬರಿ ರೂಪಾಂತರವಷ್ಟೇ.......!!!
ಕಣ್ಣೀರ ಹನಿಯಾಗ್ತೇನೆ ,ಇಲ್ಲಾ ಚರಿತ್ರೆಯ ಪುಟಗಳಾಗುತ್ತೇನೆ,
ಯಾರದ್ದೋ ನಗುವಿನ ಕಾರಣವಗ್ತೇನೆ...,,,,
ಇಲ್ಲಾ ಎಲ್ಲಾದರೂ ರಕ್ತದ ಕಲೆಯಾಗ್ತೇನೆ..,,

ಎನಗೆ ಸಾವಿಲ್ಲವೂ ..,,

ರಕ್ತವಾಗಿ ,ಜೀವವಾಗಿ ,ಹನಿ ಹನಿ
ಮಳೆಯ ನಡುವೆ ತಣ್ಣೀರ ಭಾವವಾಗಿ ,
ಅನಾಮಿಕ ಹುಡುಗಿಯ ಕನಸಿನ ಚಿತ್ರವಾಗಿ ,
ತುಂಟ ತುಟಿಗಳ ನಡುವೆ ಸ್ಪರ್ಶವಾಗಿ ..,,!!

ಬರಿ ರೂಪಾಂತರವಷ್ಟೇ...!!!

ಲೇಖನಿಯ ತುದಿಯ ಮೌನವಾಗಿ ,.
ಮಿಲನ ಸುಖದ ಮೂಲವಾಗಿ .,
ಹಲವು ಭಾವಗಳಿಗೆ ವ್ಯಕ್ತಪ್ರಜ್ಞೆಯಾಗಿ ,
ಗೆಜ್ಜೆಯಾಗಿ .,ಹೆಜ್ಜೆಯಾಗಿ ..,ಕಣ್ಣರೆಪ್ಪೆಯ ಸದ್ದಾಗಿ
ತರುಣ ಮನಸಿನ ಪಿಸುಮಾತಾಗಿ .

ನಾನು ಪ್ರಿತಿಯಾಗ್ತೇನೆ ....

ತೋಳಹಾರವಾಗಿ,ಕೆನ್ನೆಯಾ ಕೆಂಪಾಗಿ .
ನಾಚುವ ಮನಸಿನ ,ಕಾಣುವ ಕನಸಿನ
ಕನಚಿನ ನೋಟದ .,ಪ್ರತಿಮುತ್ತಿನ ಹಂಬಲಕೆ ಕಾರಣವಾಗಿ

ಪ್ರೀತಿಯೇ ನಾನಾಗ್ತೇನೆ............

ಅವಳು ಮತ್ತು ನೆನಪು

ಆರ್ದ್ರ ಮಳೆಯ ಜೋರ ನಡುವೆ .,ಒಂಟಿ ಕೊಡೆಯ ಕೆಳಗೆ ನಿಂತು ತುಂಟ ನೀರನಿಡಿವ ಆಟ .,
ಒದ್ದೆ ಒದ್ದೆ ಕೈಯನಿಡಿದು,ಬೆಚ್ಚಗಾಗೋ ನಿನ್ನ ನೋಟ
ಮುದ್ದೆಯಾಗೋ ಲತೆಯನಿಡಿದು,ಮುದ್ದು ಮನಸ ಬೊಗಸೆಲಿಡಿದು
ಮೆದ್ದು ಬರುವ ಕಳ್ಳನಾಟ
ಮಾಸ ಕಳೆದರೂ ಮಾಸದ ನೆನಪುಗಳಿಗೆ,ಮೊಸವೇತಕೆ ಗೆಳತಿ.....

ನಿನ್ನ ತುಟಿಯ ನಗುವಿನಂಚು
ನನ್ನ ಮನದ ಭಾವಚುಂಚ ಬರೆವ ಕುಂಚವಾದ ಸಮಯ
ಖಾಲಿ ಕೊರಳು ಮುತ್ತ ಸರದಿ .,ಬಳ್ಳಿ ನಡುವ ಬಳಸಿ ಹಿಡಿದು
ಹೃದಯವಿತ್ತ ಗಳಿಗೆ.................
ಮರೆಯಲಾಗದ ನೆನಪುಗಳಿಗೆ ಮೊಸವೇತಕೆ ಹುಡುಗಿ

ಕೈಯ ಬಳೆಯ ಶಬ್ದಗಳಲಿ,ಹಂಸಗಮನ ಹೆಜ್ಜೆಗಳಲಿ
ಹರಿದ ಸರದ ದಾರದಲಿ , ನಿನ್ನ ತನುವು ನನ್ನೆದೆಂದು
ಮಾತು ಕೊಟ್ಟ ಹೊತ್ತುಗಳಲಿ ...
ನೆನಪುಗಳೇ ನೆನಪಾಗಿಬಿಡುವ ನೆನಪಿಗೇತಕೆ ಮೋಸ ಗೆಳತಿ

ಪ್ರೀತಿಸದ ಗೆಳತಿಗೆ ಪ್ರೀತಿಸಿದ ಹುಡುಗ
ಪ್ರೀತಿಯ ನೆನಪಿಗೇ ಮೊಸವೇತಕೆ ಬೆಡಗಿ:)

ಅವಳು ಮತ್ತು ಕನಸು

ನಿನ ಮುಂಗುರುಳ ಕೊಂಕಲ್ಲಿ .,ಆ ತುಟಿಯ ಅಂಚಲ್ಲಿ
ಆ ಮುತ್ತ ಮತ್ತಲ್ಲಿ .,ಬಿಸಿ ಉಸಿರ ಅಪ್ಪುಗೆಯಲ್ಲಿ
ಆ ಸ್ಪರ್ಶದ ಕನಸಲ್ಲಿ.,ಕನಸ ಕನವರಿಕೆಯಲ್ಲಿ  ನಾ ಕರಗಿ ಹೋಗುವ ಮುನ್ನ
ಅಕ್ಷರೂವನಿತೆಯಾಗೆ ಪ್ರಿಯೆ ., ನನ ರಕ್ತದ ಹನಿ ಹನಿಯಲ್ಲಿ

ಮಿಲನ ಸುಖದ ಮೂಲದಲಿ ., ಮನಸ ಹುಚ್ಚುಕೋಡಿಯಲಿ
ಪ್ರೇಮಪತ್ರದ ಅಕ್ಷರದಲಿ..ಆ ಅಕ್ಷರದ ಭಾವದಲಿ
ನಿನ ಕಾಲ ಕಿರುಬೆರಳಿಗೆ ನಾ ಮುತ್ತಿಟ್ಟ ಅನುಭಾವದಿ
ನೀ ಕರುಗುವ ಮುನ್ನ ., ಹುಡುಗಿ ಕಾಡಿಬಿಡು ಒಮ್ಮೆ
ನನ ಎದೆಯ ಪ್ರತಿಮಿಡಿತದಲಿ

ಕಣ್ಣಿರ ಸ್ಪರ್ಶದಲಿ ..,ಮಳೆಯ ಪ್ರತಿ ಹನಿಯಲ್ಲಿ
ಕೆನ್ನೆಯ ಕೆಂಪಲ್ಲಿ.., ಕಾಲ್ಗೆಜ್ಜೆಯ ಸದ್ದಲ್ಲಿ
ಭಾವ ಭಾವಗಳ ವ್ಯಕ್ತ ಪ್ರಜ್ಞೆಯಲಿ
ನಾ ಕಾಣುವ ಸ್ವಪ್ನದ ಮೂರ್ತ ರೂಪದಲಿ
ಒಮ್ಮೆ ನನ್ನವಳಾಗಿಬಿಡು ಬಿಡು ಗೆಳತಿ .. ಈ ಪ್ರೀತಿ ಸಾಯುವ ಮುನ್ನ

ಪ್ರಿತಿಸಿಯೂ ಪ್ರಿತಿಸದ ಮನಸಿಗೆ.,ಮತ್ತೆ ಪ್ರೀತಿಸುವೆ ಎಂಬ ಭ್ರಮೆಗೆ  
ಪ್ರಾಣಕಾಂತನ  ಮನಸಿನ ಪುಟದಲಿ ಹಸ್ತಾಕ್ಷರವನ್ನಿತ್ತ ತಪ್ಪಿಗೆ
ಬಂದುಬಿಡು ಮತ್ತೊಮ್ಮೆ ..ಕಾಡಿಬಿಡೆ ಮನದನ್ನೆ