ನಮಗೆ ಸ್ವಾತಂತ್ರ್ಯ ಬಂತು .ಸ್ವಾತಂತ್ರ್ಯದ "ಮಹಾಸೇನಾನಿ" ಪುಣ್ಯಾತ್ಮ ನೆಹರು ಅಖಂಡ ೧೬ ವರ್ಷಗಳ ದೇಶವನ್ನ "ಉದ್ದಾರ" ಮಾಡುವ ಪ್ರಯತ್ನ ಮಾಡಿದರು.ನಾವಿವತ್ತು ಬಹಳ ಖುಷಿಯಿಂದ ಆಗಸ್ಟ್ ೧೫ ರಂದು ದ್ವಜ ಹಾರಿಸಿ ದೇಶಪ್ರೇಮದ ಬುಗ್ಗೆ ಹರಿಸಿ ಸಂತಸ ಪಡುತ್ತೇವೆ.ಆದರೆ ನಮಗೆ ಯಾಕೆ ಆಗಸ್ಟ್ ೧೫ ರಂದೇ ಸ್ವತಂತ್ರ ಬಂತು ಗೊತ್ತ.(ಯಾವತ್ತಾರು ಒಂದು ದಿನ ಬರಲೇ ಬೇಕದು ಬಿಡಿ).
ನಮಗೆ ಜುಲೈ ೪ ರಂದೇ ರಂದೇ ಸ್ವಾಂತಂತ್ರ್ಯ ಕೊಡಲು ೨೦೦ ವರ್ಷ ಶೋಷಣೆ ಮಾಡಿದ ಬ್ರಿಟಿಷರು ತಯಾರಾಗಿದ್ದರು.ಇಂಗ್ಲಂಡ್'ನ ಅರ್ಥಿಕ ಪರಿಸ್ತಿತಿ ದಿವಾಳಿಯಾಗುವ ಹಂತದಲ್ಲಿ ಇದ್ದದರಿಂದ ಅವರು ವಸಾಹತು ಒಂದನ್ನ ಬಿಡಲೇ ಬೇಕಾಗಿತ್ತು. ಅಧಿಕಾರ ಹಸ್ತಾಂತರ ಮಾಡುವುದಕ್ಕೆ ಮೌಂಟ್ ಬ್ಯಾಟನ್ ಅವರಿಗೆ ಸೂಚನೆಯೂ ಬಂದಿತ್ತು , ಆದರೆ ಆಗಸ್ಟ್ ೧೫ ರ ದಿನವನ್ನ ಮೌಂಟ್ ಬ್ಯಾಟನ್ ಅದೃಷ್ಟದ ದಿನವೆಂದು ಪರಿಗಣಿಸುತ್ತಿದ್ದ . ಯಾಕೆಂದರೆ ಆತ ಎರಡನೇ ಮಹಾ ಯುದ್ದದಲ್ಲಿ ಕಮಾಂಡರ್ ಆಗಿದ್ದಾಗ ಅಗಸ್ಟ್ ೧೫ರಂದೇ ಜಪಾನ್ ಸೇನೆ ಶರಣಾಗತಿ ಒಪ್ಪಿಕೊಂಡಿತ್ತು.ಅದನ್ನು ಸ್ಮರಣೀಯ ಮಾಡಿಕೊಳ್ಳುವಾಸೆ ಆತನ ಹೆಂಡತಿಗೆ.ಹೆಣ್ಣುಮಕ್ಕಳ ಆಸೆಗೆ ಕರುಣಾಮಯಿ ನೆಹರು ಯಾವಾಗ ತಾನೇ ಬೇಡ ಅಂದ್ರು ಹೇಳಿ.ಅದಕ್ಕೆ ನಮ್ಮ ಸ್ವಾತಂತ್ರ್ಯ ಮುಂದಕ್ಕೆ ಹೋಯ್ತು.
ಸ್ವಂತದ ಕಾಮನೆಗಳಿಗೆ ದೇಶವನ್ನು ಮಾರುವ ಬುದ್ದಿ ನಿನ್ನೆ ಮೊನ್ನೆಯದಲ್ಲ.ಕರ್ನಾಟಕದ ರಾಜಕಾರಣಿಗಳ ಬಗ್ಗೆ ಸಣ್ಣದೊಂದು ಕರುಣೆ ತೋರಿಸಬಹುದೆನ್ನಿಸುತ್ತದೆ ಅಲ್ಲವ :p