ಗೆಳತಿ.,,
ನಿನ್ನ ಸೌಂದರ್ಯ ಅನೂಪವಾದುದು .,ಅನೂರವಾದುದು.ನಿನ್ನ ರೂಪ ನನ್ನಂತರಗದ ಹೃದಯ ವೀಣೆಯ ಮೀಟಿ .,ನನ್ನ ರೋಮಾಂಚನದ ತಂತುವಾಗಿ ಮಾಡಿದೆ.ನಿನ್ನ ಮುಂಗುರುಳು ನಿನ್ನ ಕೆನ್ನೆ ತಾಕುವ ಪ್ರತಿ ಹೊತ್ತು ನನ್ನೆದೆಯ ನಗಾರಿಯ ಜೀವ ಹುಚ್ಚೆದ್ದು ಕುಣಿ ಕುಣಿದು ಕುಶಿ ಪಡುತ್ತಿದೆ.ಆ ಹುಬ್ಬ ಒಂದು ಕೊಂಕು ಈ ಪಾಮರನ ಮನಸಿನ ಅಂಚಂಚಲ್ಲು ಅಳಿಸಲಾಗದ ಭಾವಗಳ ಚಿತ್ರಗೀತೆ ಬರೆಯುತ್ತಿವೆ.ಕಣ್ಣಂಚಿನ ಆ ನೋಟದ ಒಂದು ಕ್ಷಣಕ್ಕಾಗಿ ನಾ ನನ್ನ ಕಣ್ಣ ಕೂಪದಲಿ ಕನಸುಗಳ ಬಣ್ಣ ತುಂಬಿ ಕನಸ ನೋಟದ ಅನುಭಾವಕೆ ಕನಲಿ ಕಾತರಿಸಿಹೆನು.ತುಂಟ ತುಟಿಯ ಆ ಕಿರು ನಗು ನನ್ನ ಮನದೊಳಗಿನ ಬಹುಕಾಲದ ಮುತ್ತಾಗಿ ಎಂದು ರೂಪಾಂತರ ಆಗುತ್ತದೆಂದು .., ಜೀವನದ ಆ ಪುಟದ ಆ ಕ್ಷಣಕ್ಕಾಗಿ ಈ ಜೀವ ಪ್ರತಿನಿಮಿಷ ಕಾಯುತ್ತಿದೆ.ನಿನ್ನ ಗಲ್ಲ ಹಿಡಿದು ಬೆಲ್ಲಕ್ಕಿಂತ ಸಿಹಿ ಮತ್ತೊಂದಿದೆ ಅಂತ ಕೂಗಿ ಕೂಗಿ ಹೇಳಬೇಕುಂದು ಮನಸು ಮನಸ ಮಾಡಿಯಾಗಿದೆ ಹುಡುಗಿ.
ನಿನ್ನ ಮುತ್ತಿನಂತ ಪಾದಗಳ ಮೇಲೆ ನಾನು ತುಟಿಯ ಪ್ರೆಮದುಂಗುರವಿತ್ತು.,ನಿನ ಕಾಲ್ಗಳಿಗೆ ಗೆಜ್ಜೆ ಕಟ್ಟಿ .., ಆ ಗೆಜ್ಜೆಯ ಸದ್ದಿಗೆ ನಾ ಕುಣಿದು ಅದ ನೋಡಿ ಈ ಮರ .. ಆ ಧರೆ .., ಅಲ್ಲಿರುವ ರವಿಚಂದ್ರ ಎಲ್ಲ ಕನ್ಮುಚ್ಚಿಕೊಂಡಾಗ ನಿನ್ನ ಗಲ್ಲ ಹಿಡಿದೆತ್ತಿ ನನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ಹುಚ್ಚು ಆಸೆಗೆ ನೀ ನಕ್ಕು ಬಿಡುತ್ತಿಯೇನೋ.
ಬಾಳೆ ಹಣ್ಣು ಬಾಯಿಗೆ ರುಚಿ ..,ಬಾಳೂ ಹೆಣ್ಣು ಮನಸ್ಸಿಗೆ ಶುಚಿ ಅಂತ ನಿನ್ನ ಪ್ರಿತಿಸಿದ್ದೇನೆ. ಪ್ರೆಮಿಸಿದ್ದೇನೆ.ಬಾಳಲ್ಲಿ ಬೆಳಕಾಗಲಾರೆಯ ಹುಡುಗಿ..ಒಮ್ಮೆ ಒಂದೇ ಒಂದು ಬಾರಿ ನಿನ್ನ ಮನಸಿನ ಶಾಶ್ವತ ಹುಡುಗನನ್ನಾಗಿ ನನಗೆ ಜಾಗ ಕೊಡಲಾರೆಯಾ.ಇಷ್ಟೆಲ್ಲಾ ಆಗಿ ..ಈ ಬರುವ ಪ್ರೇಮಿಗಳ ದಿನ .,ನನಗೂ ಅಗಲಿ ಎಂಬ ಹೊನ್ನಾಸೆಯೊಂದಿಗೆ ನನ್ನೆದೆಯರಸಿಯಾಗು ನೀ ಎಂದು ಆಹ್ವಾನವಿತ್ತಿದೇನೆ ಹುಡುಗಿ.ಒಪ್ಪಿಕೊಳ್ಳೆ ದೊರೆಸಾನಿ
(ತುಂಬಾ ಹಿಂದೆ ಬರೆದದ್ದು .ನೆನಪಿಗೆ )
ನಿನ್ನ ಸೌಂದರ್ಯ ಅನೂಪವಾದುದು .,ಅನೂರವಾದುದು.ನಿನ್ನ ರೂಪ ನನ್ನಂತರಗದ ಹೃದಯ ವೀಣೆಯ ಮೀಟಿ .,ನನ್ನ ರೋಮಾಂಚನದ ತಂತುವಾಗಿ ಮಾಡಿದೆ.ನಿನ್ನ ಮುಂಗುರುಳು ನಿನ್ನ ಕೆನ್ನೆ ತಾಕುವ ಪ್ರತಿ ಹೊತ್ತು ನನ್ನೆದೆಯ ನಗಾರಿಯ ಜೀವ ಹುಚ್ಚೆದ್ದು ಕುಣಿ ಕುಣಿದು ಕುಶಿ ಪಡುತ್ತಿದೆ.ಆ ಹುಬ್ಬ ಒಂದು ಕೊಂಕು ಈ ಪಾಮರನ ಮನಸಿನ ಅಂಚಂಚಲ್ಲು ಅಳಿಸಲಾಗದ ಭಾವಗಳ ಚಿತ್ರಗೀತೆ ಬರೆಯುತ್ತಿವೆ.ಕಣ್ಣಂಚಿನ ಆ ನೋಟದ ಒಂದು ಕ್ಷಣಕ್ಕಾಗಿ ನಾ ನನ್ನ ಕಣ್ಣ ಕೂಪದಲಿ ಕನಸುಗಳ ಬಣ್ಣ ತುಂಬಿ ಕನಸ ನೋಟದ ಅನುಭಾವಕೆ ಕನಲಿ ಕಾತರಿಸಿಹೆನು.ತುಂಟ ತುಟಿಯ ಆ ಕಿರು ನಗು ನನ್ನ ಮನದೊಳಗಿನ ಬಹುಕಾಲದ ಮುತ್ತಾಗಿ ಎಂದು ರೂಪಾಂತರ ಆಗುತ್ತದೆಂದು .., ಜೀವನದ ಆ ಪುಟದ ಆ ಕ್ಷಣಕ್ಕಾಗಿ ಈ ಜೀವ ಪ್ರತಿನಿಮಿಷ ಕಾಯುತ್ತಿದೆ.ನಿನ್ನ ಗಲ್ಲ ಹಿಡಿದು ಬೆಲ್ಲಕ್ಕಿಂತ ಸಿಹಿ ಮತ್ತೊಂದಿದೆ ಅಂತ ಕೂಗಿ ಕೂಗಿ ಹೇಳಬೇಕುಂದು ಮನಸು ಮನಸ ಮಾಡಿಯಾಗಿದೆ ಹುಡುಗಿ.
ನಿನ್ನ ಮುತ್ತಿನಂತ ಪಾದಗಳ ಮೇಲೆ ನಾನು ತುಟಿಯ ಪ್ರೆಮದುಂಗುರವಿತ್ತು.,ನಿನ ಕಾಲ್ಗಳಿಗೆ ಗೆಜ್ಜೆ ಕಟ್ಟಿ .., ಆ ಗೆಜ್ಜೆಯ ಸದ್ದಿಗೆ ನಾ ಕುಣಿದು ಅದ ನೋಡಿ ಈ ಮರ .. ಆ ಧರೆ .., ಅಲ್ಲಿರುವ ರವಿಚಂದ್ರ ಎಲ್ಲ ಕನ್ಮುಚ್ಚಿಕೊಂಡಾಗ ನಿನ್ನ ಗಲ್ಲ ಹಿಡಿದೆತ್ತಿ ನನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ಹುಚ್ಚು ಆಸೆಗೆ ನೀ ನಕ್ಕು ಬಿಡುತ್ತಿಯೇನೋ.
ಬಾಳೆ ಹಣ್ಣು ಬಾಯಿಗೆ ರುಚಿ ..,ಬಾಳೂ ಹೆಣ್ಣು ಮನಸ್ಸಿಗೆ ಶುಚಿ ಅಂತ ನಿನ್ನ ಪ್ರಿತಿಸಿದ್ದೇನೆ. ಪ್ರೆಮಿಸಿದ್ದೇನೆ.ಬಾಳಲ್ಲಿ ಬೆಳಕಾಗಲಾರೆಯ ಹುಡುಗಿ..ಒಮ್ಮೆ ಒಂದೇ ಒಂದು ಬಾರಿ ನಿನ್ನ ಮನಸಿನ ಶಾಶ್ವತ ಹುಡುಗನನ್ನಾಗಿ ನನಗೆ ಜಾಗ ಕೊಡಲಾರೆಯಾ.ಇಷ್ಟೆಲ್ಲಾ ಆಗಿ ..ಈ ಬರುವ ಪ್ರೇಮಿಗಳ ದಿನ .,ನನಗೂ ಅಗಲಿ ಎಂಬ ಹೊನ್ನಾಸೆಯೊಂದಿಗೆ ನನ್ನೆದೆಯರಸಿಯಾಗು ನೀ ಎಂದು ಆಹ್ವಾನವಿತ್ತಿದೇನೆ ಹುಡುಗಿ.ಒಪ್ಪಿಕೊಳ್ಳೆ ದೊರೆಸಾನಿ
(ತುಂಬಾ ಹಿಂದೆ ಬರೆದದ್ದು .ನೆನಪಿಗೆ )
ಯಾರಿಗೆ ಬರ್ದಿದ್ದೋ?
ReplyDeleteದೊರೆಸಾನಿಗೆ :):)
ReplyDeleteHmm....ಯಾರಿಗೆ ಬರ್ದಿದ್ದು?....
ReplyDeleteನಂ ಮಾವನ್ ಮಗಳಿಗೆ ;)
DeleteGunda all the best... ;) :) ni ene heLu atge sikiddu antatu.. ;)
ReplyDeleteಶ್ರೀಪಾದೂ, ಎಲ್ಲಾದಕ್ಕೂ ಸೇರ್ಸಿ ಒಂದರಲ್ಲೇ ಕಮೆಂಟ್ ಒಗೀತೆ.. ಮಸ್ತ್ ಇದ್ದೋ :) ಅರೆಬೆಂದ ಮಾತುಗಳು, ಸರಸೀ, ಕವನಗಳು ಎಲ್ಲವೂ ಚೆನ್ನಾಗಿದ್ದು.. ಒಂದರಲ್ಲೇ ಕಮೆಂಟಿದ್ದಕ್ಕೆ ಸ್ವಾರಿ :) ಮುಂದೆ ಬರಿ
ReplyDelete