ಬದುಕನ್ನ ಅಲ್ಲಿನ್ದಿಲ್ಲಿವರೆಗೂ ಮಗುಚಿ ಹಾಕುವುದು, ಖಾಲಿ ಒಂದು ತಿರುವು. ಹುಬ್ಬಿನದೋ
ಸೊಂಟದ್ದೋ ಅಥವಾ ಈ ದರಿದ್ರ ದಾರಿಯದ್ದೋ ಆವುದೋ ಒಂದು ."ಎಲ್ಲಿಗ್ರೀ ಟಿಕೇಟು" , ಈ
ಕಂಡಕ್ಟರನ ಗೊಗ್ಗರು ದ್ವನಿಗೆ ಬಳ್ಳಾರಿ ಅದಿರು ತುಮ್ಬಿಬಿಡಬೇಕು. "ಕೊಡಿ ,
ನಮ್ಮೂರಿಗೊಂದು". ನಮ್ಮೂರು ಯಾವುದೆಂದು ಈ ಪಾಪದ ಕಂಡಕ್ಟರಿಗೆ ಗೊತ್ತಿರಲು ನಾನಾವ ಗಿಡದ
ತೊಪ್ಪಲು. " ಕೊಪ್ಪಲಿಗೆ ಕೊಡಿ".
ಓ ಅಲ್ಲಿ , ಕರಿ ಸೀರೆಯೊಂದಿಗೆ ನಿಂತಿರುವ ಹುಡುಗಿ ನನ್ನ ಪಕ್ಕದಲ್ಲಾದರೂ ಕೂರಬಹುದಿತ್ತು. ಈ ಮಳೆಯಲ್ಲದ ಮಳೆಯಲ್ಲಿ ಯಾವುದಾದರೂ ಮುರುವಿನಲ್ಲಿ ಭುಜಕ್ಕೆ ಭುಜ ತಾಕಿ ನನ್ನ ಬದುಕೂ ಮಗುಚಿಕೊಳ್ಳುತ್ತಿತ್ತೇನೋ.ತತ್ ಭುಜದ ಮೇಲೆ ಕತ್ತು ಮುರಿದ ಕೋಳಿಯಂತೆ ಮಗುಚಿಕೊಳ್ಳುತ್ತಿರುವ ಈ ಮುದುಕನೋ ಆತನ ತಲೆಯೋ .,ಇಲ್ಲೂ ಅದೃಷ್ಟವಿಲ್ಲ.ಆಕೆ ಅಲ್ಲ್ಯಾರದ್ದೋ ಪಕ್ಕ ಕುಳಿತಾಯಿತು.ನೋಡು ಹುಡುಗನ ಪಕ್ಕ ಹೇಗೆ ಕೂರುತ್ತಾಳೆ .ಛೆ ಸಂಸ್ಕಾರವಿಲ್ಲ.ಆಕೆಯೂ ಹಾಗೆ ಅಲ್ಲವೇ ಭಿಡೆ ಇಲ್ಲದೆ ಒರಗಿಕೊಳ್ಳುತ್ತಿದ್ದಳು.ನನಗೂ ಮಹಾನ್ ಸುಬುಗನೆನ್ನಿಸಿಕೊಳ್ಳುವ ಚಟ.ಏನೂ ತಪ್ಪು ನೆಡಸದೆ ತಪ್ಪು ಮಾಡಿಬಿಟ್ಟೆ.ಆಆಆ , ಏನು ತಿರುವು .,ಕೊಂಚವೂ ನಿಧಾನಿಸದೇ ತಿರುಗಿಸುತ್ತಾನೆ.ಡ್ರೈವೆರ್ ತಲೆ ಕುಟ್ಟಿಬಿಡಬೇಕು.
ಅಲ್ಲ ,ಜೀವನದಲ್ಲಿ ಯಾವುದೂ ಅನಿವಾರ್ಯವಲ್ಲವಂತೆ, ಹಾಗೆಲ್ಲ ಬದುಕಲು ಸಾಧ್ಯವೇ.ನನ್ನ ಹತ್ತಿರ ತಿಂಡಿ ತಿನ್ನದೇ ಇರಲು ಸಾಧ್ಯವೇ ಇಲ್ಲ ಎಂದಾಗ ಇಡೀ ಮನೆಗೆ ಮನೆ ಸೂರು ಹಾರುವಂತೆ ನಕ್ಕಿದ್ದಳಲ್ಲ.ಅವಾಗಲೂ ಸಿಗರೇಟಿನ ವಾಸನೆ,ತತ್.ನನ್ನ ಬಿಡುತ್ತಿಯ , ಅದು ಹಾಗಿರಲಿ ಸಿಗರೇಟೆ ಬಿಡಲಾಗದು ನಿನ ಕೈಲಿ ಮಂಕು.ಸಿಗರೆಟಿದ್ದದ್ದು ಕೈಯಲ್ಲಿ , ಹೊಗೆ ಬಂದದ್ದು ಅವಳ ಕಣ್ಣಲ್ಲಿ.ಅವತ್ತು ಎದೆ ಮೇಲೆ ಸಿಗರೆಟಿಟ್ಟು ಆರಿಸಿದವಳು , ಮತ್ತೆ ಮುಟ್ಟಿಲ್ಲ.ಅಸ್ಪರ್ಷ್ಯ.ಪ್ಯಾಕ್ಕಲ್ಲಿ ಸಿಗರೇಟು ಉಂಟೆ, ಮುಂದಿನ ಸ್ಟಾಪ್ನಲ್ಲಾದರೂ ನೆನಪು ಮಾಡಿ ತೆಗೆದುಕೊಳ್ಳಬೇಕು."ಕೊಪ್ಪಲಿ ಕೊಪ್ಪಲಿ ಕೊಪ್ಪಲಿ" ಈ ಕ್ಲೀನರ್ ಗೆ ಕನ್ನಡ ಮಾಷ್ಟರು ಅರಿದ್ದಿರಬಹುದು.ಏನಾದರಾಗಲಿ ಬಲಗಾಲಿಟ್ಟು ಇಳಿದು ಬಿಡುವೆ.
ತಾರ್ಕಿಕವಾಗಿ , ಸುಟ್ಟು ಇಂಗ್ಲಿಷ್ ನಲ್ಲಿ ಆಕೆ ಹೇಳುವ ಹಾಗೆ , technically ಮಾಡಿದ್ದು ಸರಿ ಅಂತೆ. ಅಲ ಈ ತರ್ಕಕ್ಕೂ ಭಾವನೆಗೂ ಏನಾದರು ಲಿಂಕ್ ಉಂಟೆ.ತಾರ್ಕಿಕವಾಗಿ ಸರಿ ಎಂದು ಸಾಧಿಸಬಿಡಬಹುದಾಗಿದ್ದು ಭಾವನೆಗಳ ಲಂಗೋಟಿ ಬಿಚ್ಚಿ ನೆಡೆದುಬಿಡಬಹುದಲ್ಲವ.ಆಕೆಯ ಸಿಗರೆಟಿನಂತೆಯೇ ಆಕೆಯ ಯೋಚನೆಗಳು.ಸುಡುತ್ತವೆ.ಆರೋಗ್ಯಕ್ಕೆ ಹಾನಿಕರ.
ನಡೆದ ಹೆಜ್ಜೆ ಎಷ್ಟಾಗಿರಬಹುದು.ನನ್ನ ತಲೆ ನನಗೇ ಪ್ರಶ್ನೆ ಕೇಳುವಂತಾಯಿತು,ಆಕೆಯ ಜೊತೆಗೋ ಇಲ್ಲ ಈ ಹಾಳು ಬಸ್ ಇಳಿದ ನಂತರವೋ??.ಮೆದುಳಲ್ಲೂ ಎರಡು ಭಾಗವಂತೆ!!.ಮನೆ ಹಂಚು ಒಡೆದು ಸೋರುತ್ತಿದೆ ಸರಿ ಮಾಡಿಬಿಡಬೇಕು.
ಅರೆ ಆ ಕರಿ ಸೀರೆ ಇಲ್ಲೇ ಇಳಿಯಿತೇ.ಗಮನಿಸಲೇ ಇಲ್ಲ.ಸ್ವಲ್ಪ ಹೆಜ್ಜೆ ಕಮ್ಮಿ ಮಾಡಬೇಕು.ಏನಾದರಾಗಲಿ ಕೇಳಿಬಿಡಬೇಕು.ಬ್ಲೌಸಿಗೆ ಪಿನ್ನು ಚುಚ್ಚಿದೆಯೋ ಇಲ್ಲವೋ ಅಂತ. ಹಾಕಿದ ಕವಳದ ಸಿಕ್ಕಿ ಕೊಂಡುಬಿಟ್ಟಿದೆ.ಬಹುಶಃ ಜೊತೆಗೆ ಕರೀ ಸೀರೆ ಕೂಡ.
ಓ ಅಲ್ಲಿ , ಕರಿ ಸೀರೆಯೊಂದಿಗೆ ನಿಂತಿರುವ ಹುಡುಗಿ ನನ್ನ ಪಕ್ಕದಲ್ಲಾದರೂ ಕೂರಬಹುದಿತ್ತು. ಈ ಮಳೆಯಲ್ಲದ ಮಳೆಯಲ್ಲಿ ಯಾವುದಾದರೂ ಮುರುವಿನಲ್ಲಿ ಭುಜಕ್ಕೆ ಭುಜ ತಾಕಿ ನನ್ನ ಬದುಕೂ ಮಗುಚಿಕೊಳ್ಳುತ್ತಿತ್ತೇನೋ.ತತ್ ಭುಜದ ಮೇಲೆ ಕತ್ತು ಮುರಿದ ಕೋಳಿಯಂತೆ ಮಗುಚಿಕೊಳ್ಳುತ್ತಿರುವ ಈ ಮುದುಕನೋ ಆತನ ತಲೆಯೋ .,ಇಲ್ಲೂ ಅದೃಷ್ಟವಿಲ್ಲ.ಆಕೆ ಅಲ್ಲ್ಯಾರದ್ದೋ ಪಕ್ಕ ಕುಳಿತಾಯಿತು.ನೋಡು ಹುಡುಗನ ಪಕ್ಕ ಹೇಗೆ ಕೂರುತ್ತಾಳೆ .ಛೆ ಸಂಸ್ಕಾರವಿಲ್ಲ.ಆಕೆಯೂ ಹಾಗೆ ಅಲ್ಲವೇ ಭಿಡೆ ಇಲ್ಲದೆ ಒರಗಿಕೊಳ್ಳುತ್ತಿದ್ದಳು.ನನಗೂ ಮಹಾನ್ ಸುಬುಗನೆನ್ನಿಸಿಕೊಳ್ಳುವ ಚಟ.ಏನೂ ತಪ್ಪು ನೆಡಸದೆ ತಪ್ಪು ಮಾಡಿಬಿಟ್ಟೆ.ಆಆಆ , ಏನು ತಿರುವು .,ಕೊಂಚವೂ ನಿಧಾನಿಸದೇ ತಿರುಗಿಸುತ್ತಾನೆ.ಡ್ರೈವೆರ್ ತಲೆ ಕುಟ್ಟಿಬಿಡಬೇಕು.
ಅಲ್ಲ ,ಜೀವನದಲ್ಲಿ ಯಾವುದೂ ಅನಿವಾರ್ಯವಲ್ಲವಂತೆ, ಹಾಗೆಲ್ಲ ಬದುಕಲು ಸಾಧ್ಯವೇ.ನನ್ನ ಹತ್ತಿರ ತಿಂಡಿ ತಿನ್ನದೇ ಇರಲು ಸಾಧ್ಯವೇ ಇಲ್ಲ ಎಂದಾಗ ಇಡೀ ಮನೆಗೆ ಮನೆ ಸೂರು ಹಾರುವಂತೆ ನಕ್ಕಿದ್ದಳಲ್ಲ.ಅವಾಗಲೂ ಸಿಗರೇಟಿನ ವಾಸನೆ,ತತ್.ನನ್ನ ಬಿಡುತ್ತಿಯ , ಅದು ಹಾಗಿರಲಿ ಸಿಗರೇಟೆ ಬಿಡಲಾಗದು ನಿನ ಕೈಲಿ ಮಂಕು.ಸಿಗರೆಟಿದ್ದದ್ದು ಕೈಯಲ್ಲಿ , ಹೊಗೆ ಬಂದದ್ದು ಅವಳ ಕಣ್ಣಲ್ಲಿ.ಅವತ್ತು ಎದೆ ಮೇಲೆ ಸಿಗರೆಟಿಟ್ಟು ಆರಿಸಿದವಳು , ಮತ್ತೆ ಮುಟ್ಟಿಲ್ಲ.ಅಸ್ಪರ್ಷ್ಯ.ಪ್ಯಾಕ್ಕಲ್ಲಿ ಸಿಗರೇಟು ಉಂಟೆ, ಮುಂದಿನ ಸ್ಟಾಪ್ನಲ್ಲಾದರೂ ನೆನಪು ಮಾಡಿ ತೆಗೆದುಕೊಳ್ಳಬೇಕು."ಕೊಪ್ಪಲಿ ಕೊಪ್ಪಲಿ ಕೊಪ್ಪಲಿ" ಈ ಕ್ಲೀನರ್ ಗೆ ಕನ್ನಡ ಮಾಷ್ಟರು ಅರಿದ್ದಿರಬಹುದು.ಏನಾದರಾಗಲಿ ಬಲಗಾಲಿಟ್ಟು ಇಳಿದು ಬಿಡುವೆ.
ತಾರ್ಕಿಕವಾಗಿ , ಸುಟ್ಟು ಇಂಗ್ಲಿಷ್ ನಲ್ಲಿ ಆಕೆ ಹೇಳುವ ಹಾಗೆ , technically ಮಾಡಿದ್ದು ಸರಿ ಅಂತೆ. ಅಲ ಈ ತರ್ಕಕ್ಕೂ ಭಾವನೆಗೂ ಏನಾದರು ಲಿಂಕ್ ಉಂಟೆ.ತಾರ್ಕಿಕವಾಗಿ ಸರಿ ಎಂದು ಸಾಧಿಸಬಿಡಬಹುದಾಗಿದ್ದು ಭಾವನೆಗಳ ಲಂಗೋಟಿ ಬಿಚ್ಚಿ ನೆಡೆದುಬಿಡಬಹುದಲ್ಲವ.ಆಕೆಯ ಸಿಗರೆಟಿನಂತೆಯೇ ಆಕೆಯ ಯೋಚನೆಗಳು.ಸುಡುತ್ತವೆ.ಆರೋಗ್ಯಕ್ಕೆ ಹಾನಿಕರ.
ನಡೆದ ಹೆಜ್ಜೆ ಎಷ್ಟಾಗಿರಬಹುದು.ನನ್ನ ತಲೆ ನನಗೇ ಪ್ರಶ್ನೆ ಕೇಳುವಂತಾಯಿತು,ಆಕೆಯ ಜೊತೆಗೋ ಇಲ್ಲ ಈ ಹಾಳು ಬಸ್ ಇಳಿದ ನಂತರವೋ??.ಮೆದುಳಲ್ಲೂ ಎರಡು ಭಾಗವಂತೆ!!.ಮನೆ ಹಂಚು ಒಡೆದು ಸೋರುತ್ತಿದೆ ಸರಿ ಮಾಡಿಬಿಡಬೇಕು.
ಅರೆ ಆ ಕರಿ ಸೀರೆ ಇಲ್ಲೇ ಇಳಿಯಿತೇ.ಗಮನಿಸಲೇ ಇಲ್ಲ.ಸ್ವಲ್ಪ ಹೆಜ್ಜೆ ಕಮ್ಮಿ ಮಾಡಬೇಕು.ಏನಾದರಾಗಲಿ ಕೇಳಿಬಿಡಬೇಕು.ಬ್ಲೌಸಿಗೆ ಪಿನ್ನು ಚುಚ್ಚಿದೆಯೋ ಇಲ್ಲವೋ ಅಂತ. ಹಾಕಿದ ಕವಳದ ಸಿಕ್ಕಿ ಕೊಂಡುಬಿಟ್ಟಿದೆ.ಬಹುಶಃ ಜೊತೆಗೆ ಕರೀ ಸೀರೆ ಕೂಡ.
ನೈಸ್ ಶ್ರಿಪಾದೂ... ತುಂಬಾ ಚೆನ್ನಾಗಿದ್ದು ... ಈ ಕತೆಯನ್ನ ಇನ್ನೂ ಮುಂದುವರೆಸು ...
ReplyDeleteಭುಜಕ್ಕೆ ಭುಜ ತಾಕಿ ನನ್ನ ಬದುಕೂ ಮಗುಚಿಕೊಳ್ಳುತ್ತಿತ್ತೇನೋ.ತತ್ ಭುಜದ ಮೇಲೆ ಕತ್ತು ಮುರಿದ ಕೋಳಿಯಂತೆ ಮಗುಚಿಕೊಳ್ಳುತ್ತಿರುವ ಈ ಮುದುಕನೋ ಆತನ ತಲೆಯೋ ..
ReplyDeleteಸುಪರ್ ಲೇ :-)
@ವೆಂಕ ..ಮುಂದುವರೆಸುವ ಆಲೋಚನೆ ಇದ್ದು.ಧವಾ :)
ReplyDelete@@ಕಿರಣ ..ಶೈಲಿ ನಿಂದೆಯ ಅನಿಸಲ್ಯ
ಬಿಡಡ... ಹಿಂದೇ ಹೋಗ ಶ್ರೀಪಾದು.... ಚೆನ್ನಾಗಿದ್ದು.....:)
ReplyDelete"ಈ ಮಳೆಯಲ್ಲದ ಮಳೆಯಲ್ಲಿ ಯಾವುದಾದರೂ ಮುರುವಿನಲ್ಲಿ ಭುಜಕ್ಕೆ ಭುಜ ತಾಕಿ ನನ್ನ ಬದುಕೂ ಮಗುಚಿಕೊಳ್ಳುತ್ತಿತ್ತೇನೋ." ಒ೦ದೂಮುಕ್ಕಾಲು ವರ್ಷದ ಹಿ೦ದೆ ಬೆ೦ಗಳೂರಿ೦ದ ಮ೦ಗಳೂರಿಗೆ ಬಸ್ಸಲ್ಲಿ, ಪಕ್ಕದ ಸೀಟಲ್ಲಿ ರಾತ್ರಿಯಿಡೀ ಭುಜಕ್ಕೆ ಭುಜ ತಾಗಿದ್ದು ನೆನಪಾಯ್ತು. ಬದುಕು ಮಗುಚಿಕೊಳ್ಳುತ್ತಾ ಎ೦ದು ಕಾಯ್ತಾ ಇದ್ದೇನೆ. ಕಥೆ ಮು೦ದೆ ಓದಲಾಗಲಿಲ್ಲ. ಸ್ಸಾರಿ.....!!!
ReplyDeleteಹೆ ಹೆ .ಸಚಿನ್. ಇಜ್ಜೋಡು ಸಿಕ್ಚ ;)
Deleteರಶ್ ಬಸ್ಸಲ್ಲಿ ಇದ್ದಾಗ ಬಪ್ಪ ಸಂಬಂಧನೆ ಇಲ್ದೆ ಇರ ಆಲೋಚನೆಗಳನ್ನ ಚೊಲೋ ಮಾಡಿ ಬರದ್ದೆ... :) ನಂಗ್ ಅನಸ್ಚು ಕಿಣ್ಣನ ಶೈಲಿ ಹೋಲ್ತು ಹೇಳಿ... :P
ReplyDeleteಚೊಲೋ ಇದ್ದೋ.. ಇವತ್ತು ಓದ್ತಾ ಇರೋ ನಿನ್ನ ಮೂರ್ನೇ ಪೋಸ್ಟು.. ಹ್ಯಾಟ್ರಿಕ್ ಹೀರೋ ಆದೆ ಬಿಡ :-)
ReplyDelete