Monday, August 29, 2011

ತಲೆಮಾರು-೨

ವಿಷಣ್ಣ ಭಾವದ ಶೃಂಗದಲ್ಲಿ ಕುಳಿತು ಶಶಾಂಕ ಅಳುವುದೊಂದು ಬಾಕಿ ಇತ್ತು.ಅಷ್ಟಕ್ಕೂ ತಾನು ಮಾಡಿದ್ದೂ ಹೇಗೆ ಮತ್ತು ಏನಕ್ಕೆ ತಪ್ಪು ಅಂತ ಅರ್ಥವೇ ಆಗದೆ ತೊಳಲಾಡಿದ್ದ.ಕಾಲೇಜ್ ನಲ್ಲಿ ಹುಡುಗಿಯರೂ ಕುಡೀತಾರೆ., ಇನ್ನು ನಾನು ಕುಡಿದಿಲ್ಲ ಅಂದ್ರೆ .,ಪಾಪು ಅಂತ ಜೀವಮಾನವಿಡಿ ಅಣಕಿಸುತ್ತಾರೆ. ಅದಕ್ಕಿಂತ ದೊಡ್ಡ ಅವಮರ್ಯಾದೆ ಮತ್ತೊಂದಿಲ್ಲ .,ಇವತ್ತಿನ ಕಾಲಕ್ಕೆ ಅಪ್ಪ ಇನ್ನು ಅಪ್ಡೇಟ್ ಆಗೇ ಇಲ್ಲ ಎಂದು ಬೇಜಾರಿಸುತ್ತಾ.ಗೆಳೆಯ ಸಂಜಯನಿಗೆ ಹೇಳಿ ಮನಸ್ಸು ಹಗುರ ಮಾಡಿಕೊಳ್ಳಲು ಹೊರಟ.
                                                   ------------------------------
  ಸಂಜೆ ಅಡ್ಡಾದಲ್ಲಿ ., ಶಶಾಂಕ ತಾ ಸಿಕ್ಕಿಬಿದ್ದ ಘಟನೆ ಹೇಳಿದರೆ ಗೆಳೆಯರೆಲ್ಲ ಬಿದ್ದು ಬಿದ್ದು ನಗುತ್ತಿದ್ದರು.ಸಣ್ಣ ಮುಖ ಮಾಡಿ ಕುಳಿತ ಶಶಾಂಕನನ್ನ ನೋಡಲಾಗದೆ .,ಸಂಧ್ಯಾ ಎಲ್ಲರಿಗೂ ಕಣ್ಸನ್ನೆ ಮಾಡಿ ಸುಮ್ಮನಾಗಿಸಿದಳು. ಹೋಗಿ ಶಶಾಂಕನನ್ನ ಸಮಾಧಾನ ಮಾಡತೊಡಗಿದಳು.,
"ಶಶ್., ಅವೆಲ್ಲ ಕಾಮನ್ ಕಣೋ .,ಅವ್ರಿಗೆ ಎಲ್ಲಾರು ತಾವ್ ಹೇಳ್ದಂಗೆ ಕೇಳಬೇಕು ಅಂತ ಆಸೆ .,ನಮ್ಮಪ್ಪಾನೂ ಬೈತಾರೆ ., ಜೀನ್ಸ್ ಯಾಕೆ ಅಷ್ಟು  ಕೆಳಗೆ ಹಾಕ್ಕೊತೀಯ ., ಅಷ್ಟು ಟೈಟ್ ಶರ್ಟ್ ಏನಕ್ಕೆ  ಅಂತೆಲ್ಲ .,ತಲೆ ಮೇಲೆ ಸೆರಗು ಹಾಕ್ಕೊಂಡು ಕೂತ್ಕೊಳೋಕೆ ಇದೇನು ಹತ್ತನೇ ಶತಮಾನನ.ಹಾಗ್ ಇರ್ಬೇಕು ಅನ್ತಿದ್ದಿದ್ರೆ ಹತ್ನೆ ಕ್ಲಾಸ್ಗೆ ಬಿಡಿಸಬೇಕಿತ್ತು. ಇಂಟರ್ನ್ಯಾಷನಲ್ ಸ್ಚೂಳು ಕಾಲೇಜು ಸೇರಿದ ಮೇಲೆ ಅದೇ ಸ್ಟ್ಯಾಂಡರ್ಡ್ ನ ಮೇನ್ಟೇನ್ ಮಾಡಬೇಕು.ಅವರಿಗೆಲ್ಲ ಅದೆಲ್ಲಿ ಅರ್ತ ಆಗತ್ತೆ ..ಅವರಿದ್ದಾಗ ಇರೋ ಕಾಲೇಜೆ ಇವಗಳು ಇರೋದು ಅನ್ಕೊಂಡ್ ಬಿಟ್ಟಿಯಾರೆ., ಓಲ್ಡ್  ಜನ್ಕ್ಸ್ "

ಸಂಜಯನೂ ದನಿಗೂಡಿಸಿದ
"ಹು ಮಗಾ.,ಅವರಿದ್ದಾಗ .,ಇರೋ values  ನ ಫಾಲ್ಲೋ ಮಾಡಬೇಕು ಅಂದ್ರೆ ಅವಾಗಿನ ಲೈಫ್ ಸ್ಟೈಲ್ ಇವಾಗ್ಲೂ ಇರ್ಬೇಕು..ನಮಪ್ಪಂಗೆ ಅಥವಾ ನಿಮಪ್ಪಂಗೆ ಆಟ ಆಡಬೇಡ .,ಆದ ಮಾಡಬೇಡ ಈದ್ ಮಾಡಬೇಡ ಅಂತ ನಮ್ಮಜ್ಜ ನಿಮ್ಮಜ್ಜ ಕಂಡಿಶನ್ ಹಾಕಿದ್ರಾ?? ಇದನ್ನೇ ಓದು ., ಇಷ್ಟೇ ಮಾರ್ಕ್ಸ್ ತೆಗಿ ಇಲ್ಲ ಅಂದ್ರೆ ಕಾಲ್ ಮುರೀತೀನಿ ಅಂತ ಯಾವಾಗ್ಲಾರು ಹೇಳಿದ್ರ .,?? ದುಡ್ ಇಟ್ಕೊಂಡ್ರೆ.,ಒಳ್ಳೆ ಡ್ರೆಸ್ ಹಾಕ್ಕೊಂಡ್ರೆ ಮಾತ್ರ ಮರ್ಯಾದೆ ಸಿಗೋದ ಅವಾಗೆಲ್ಲ??
ಬಿಕ್ಷುಕರು ಬಂದ್ರೆ ಕಾರಿನ ಗ್ಲಾಸ್ ಇಳಿಸದೆ ಮುಖ ಸಿಂಡರಿಸ್ತಾರೆ ., ನಾವ್ ಅದೇ ಸ್ಟ್ಯಾಂಡರ್ಡ್ ಮಾಡ್ತೀವಿ ಅಂದ್ರೆ ಅವ್ರಿಗೆ ಉರಿ" ಅಂತ ಸ್ವಲ್ಪ ಲಾಜಿಕಲ್  ಸ್ವಲ್ಪ ಸಿಟ್ಟಿನ ವಾದ ಮುಂದಿಟ್ಟ.

"ಮಗಾ .,ಅಷ್ಟಕ್ಕೂ ದುಡ್ಡು ಮಾಡೋದ್ ಏನಕ್ಕೆ .,ಜನ ದುಡಿಯೋದ್  ಏನಕ್ಕೆ ., ಲೈಫ್ ಎಂಜಾಯ್ ಮಾಡೋಕೆ ತಾನೆ ??..ಎಷ್ಟ್ ದಿನ ಬದುಕ್ತಿಯೋ ಯಾರಿಗ್ ಗೊತ್ತು., ಈ ಬೆಂಗಳೂರಲ್ಲಿ ಸಾಯೋದಿಕ್ಕೆ ರೀಸನ್ನೇ ಬೇಡ.ನಾಳೆ ಬಗ್ಗೆ ಯೋಚನೆ ಮಾಡ್ತಾ ಮಾಡ್ತಾ ಇವತ್ತಿನ ಸಾಯ್ಸೋ ಮಂದಿ ಫೂಲಿಶ್ ಕಣೋ.live  today ., tommarrow is  too  late "  ಹರೀಶ ಕೂಡ ಒಂದಿಷ್ಟು ಪದ ಸೇರಿಸಿದ."ಆಚೆ ಕಿವಿಲ್ ಕೇಳಿ ಈಚೆ ಕಿವಿಲ್ ಬಿಡೋ ಮಗಾ" ಎಂದು ಮುಂದುವರೆಸಿದ.
ಮಬ್ಬುಗತ್ತಿಲನಲ್ಲಿ ಮುಂದಿನ ಯೋಚನೆ ಮಾಡೋಣ ಎಂಬ ನಿರ್ಧಾರದೊಂದಿಗೆ  ., ಮತ್ತೊಮ್ಮೆ ಸಿಕ್ಕಿಹಾಕಿಕೊಳ್ಳಬೇಡ ಎಂಬ ಎಚ್ಚರಿಕೆಯೊಂದಿಗೆ ಮೀಟಿಂಗ್ ., ಪ್ರತಿಷ್ಟಿತ ಬಾರ್ ಒಂದಕ್ಕೆ ಸ್ಥಳಾಂತರಗೊಂಡಿತು.                                                                                                           ---------------------------------                                                         ಹಳೆಯ ಗೆಳೆಯ ರಾಮಮೂರ್ತಿಯೊಂದಿಗೆ .,ಕೈಯಲ್ಲಿದ್ದ ಗ್ಲಾಸ್ ಒಳಗಿನ ನಿಧಾನ ವಿಷ ನೋಡುತ್ತಾ  ., "ಮಗನೂ ಕುಡಿಯುತ್ತಾನೆ ಮಾರಾಯ" ಎಂದೇಳಿದ ರಾಜೇಂದ್ರ.
ದೊಡ್ಡದೊಂದು ನಗೆಯ ನಕ್ಕು ಮೂರ್ತಿ ಹೇಳಿದ "ತಾವು ಕುಡಿಯುತ್ತಿರುವುದೇನೂ ಗೊಮೂತ್ರವೋ"
"ಹಾಗಲ್ಲಯ್ಯ., ನಾನು ದುಡೀತೇನೆ ., ಜೀವನ ಕಂಡಿದ್ದೇನೆ .,ಕಷ್ಟ ಸುಖಗಳು ಗೊತ್ತು., ಅವನಿಗಿನ್ನೂ ಮೀಸೆ ಸರಿಯಾಗಿ ಮೂಡಿಲ್ಲ ಗೊತ್ತಾ"
"ನಿನ್ನಪ್ಪ ನಿನ್ನ ವಯಸ್ಸಿಗೆ ಕುಡೀತಿದ್ರೆನೂ??., ಅವಾಗ ಅವರು ಜೀವನ ಕಂಡಿರ್ಲಿಲ್ವ??"
"ಹಾಗಲ್ಲಯ್ಯ ........" ಅರ್ಧದಲ್ಲೇ ತಡೆದ ಮೂರ್ತಿ
"ನೋಡು ., ಕುಡಿಯುವುದಕ್ಕೆ ಅವೆಲ್ಲ ಕಾರಣಗಳಷ್ಟೆ., ನಿನ್ನ ಮಗನಿಗೆ ಕೇಳಿದರೆ ಅವನೂ ಒಂದಷ್ಟು ಕಾರಣಗಳನ್ನ ಕೊಟ್ಟಾನು.ಅದಲ್ಲ ಉತ್ತರ.ನೀ ಅವನ ವಯಸ್ಸಿದ್ದಾಗ ., ಶೆಟ್ಟರ ಅಂಗಡಿಯ ಸುಬ್ಬಣ್ಣನಿಗೂ ನಿನ್ನಪ್ಪ ಗೌರವ ಕೊಡುತ್ತಿದ್ದರು.ಅವರು ಶ್ರೀಮಂತರು ಹೇಳುವ ಕಾರಣಕ್ಕಾ??.ಅವಾಗ ಅವರವ ವ್ಯಕ್ತಿತ್ವ., ಅವರಿಗೆ ಗೌರವ ದಕ್ಕಿಸಿಕೊಡುತ್ತಿತ್ತು.ತಿಳಿದವರು ಹೇಳುವ ಕಾರಣಕ್ಕೆ ಗೌರವ ಕೊಡು .,ವಯಸ್ಸಿಗೆ ಗೌರವ ಕೊಡು ಅಂತ ನಿನ್ನ ಅಪ್ಪ ನಿನಗೆ ತಿದ್ದಿದ್ದರು.ಇವಾಗ ನೀ ಮಾಡಿದ್ದೇನು .,ನೀ ಒಬ್ಬನೇ ಅಲ್ಲ ನಾವೆಲ್ಲಾ ಮಾಡಿದ್ದೇನು"
 ರಾಜೇಂದ್ರನಿಗೆ ಮಗಾ ಕುಡಿಯುವುದಕ್ಕೂ ., ಇದಕ್ಕೂ ಎತ್ತೆಣಿ0ದೆತ್ತ ಸಂಬಂದ ಎಂದು ಅರ್ಥವಾಗಲಿಲ್ಲ.
"ಮನೆಯಲ್ಲಿ ಅಡಿಗೆ  ಮಾಡುವ ಆಳಿಗೆ ನಾಗ ಅಂತ ಕರೆ ಅಂತ ನಿನ್ನ ಮಗನಿಗೆ ಹೇಳಿಕೊಟ್ಟಿದ್ದಿಯ.,ಅಥವಾ ವಯಸ್ಸು ಮತ್ತು ತಿಳುವಳಿಕೆಗಿಂತ ., ದುಡ್ಡಿನ ಆಧಾರದ ಮೇಲೆ ಮನುಷ್ಯನಿಗೆ ಗೌರವ ಕೊಡುವುದ ಹೇಳಿಕೊಟ್ಟು., ಟೋಟಲ್ಲಾಗಿ ದುಡ್ಡಿನ ಸಂಸ್ಕೃತಿಯಲ್ಲಿ ಮಗನ ಬೆಳಿಸಿ ಈಗ ನಿನ್ನ ಹಾಗೆ ಇರಬೇಕು ಅಂದರೆ ?? ಆತ ದುಡ್ಡು ಯಾವ ಸಂಸ್ಕೃತಿ ಹೇಳತ್ತೂ  ಅದನ್ನ ಅನುಸರಿಸುತ್ತಾನೆ ., ಅಷ್ಟೇ "
"ಬಿಸಿನೆಸ್ಸ್ ಕೂಡ ಒಂದು ರೀತಿಯ ರೀಲೆಶನ್ ಆಗಿದ್ದ ಕಾಲವನ್ನ., ರೀಲೆಶನ್ ಕೂಡ ಒಂದು ಬಿಸಿನೆಸ್ಸ್ ಆಗುವ ಹಾಗೆ ಬದಲಾಯಿಸಿದ ಕೀರ್ತಿ ನಮ್ಮದು ರಾಜೇಂದ್ರ., ಪರಿವರ್ತನೆ ಜಗದ ನಿಯಮ"
ರಾಜೇಂದ್ರನಿಗೆ ಇವೆಲ್ಲ ಸಹ್ಯವಾಗಲಿಲ್ಲ.,ಬೋಳಿಮಗ ಬುದ್ದಿಜೀವಿ ಆಡಿದ ಹಾಗೆ ಆಡ್ತಾನೆ ಅಂತ ಮನಸ್ಸಿನಲ್ಲೇ ಬಯ್ಯುತ್ತ ಎದ್ದ.
"ಬಾಯಿಗೆ ಮೌತ್ ಫ್ರೆಶ್ನೆರ್ ಹಾಕ್ಕೊಳೋ ಮಗನಿಗೆ ಗೊತಾದ್ರೆ ಮರ್ಯಾದೆಗೇಡು" ಅಂತ ಮೂರ್ತಿ ಕಿಚಾಯಿಸಿದ್ದು ತಮಾಷೆಗೆ ಅಂತ ಅನ್ನಿಸಲಿಲ್ಲ ರಾಜೇಂದ್ರನಿಗೆ. ಅದರೂ ಹಾಕಿಕೊಳ್ಳುವುದ ಮರೆಯಲಿಲ್ಲ.
                                                                    --------------------------------------
ಸಂಜೆಯ ಮೀಟಿಂಗ್ ಮುಗಿದ ಮೇಲೆ ಶಶಾಂಕ ಸಂಧ್ಯಾಳನ್ನ ಅವಳ ಮನೆಗೆ ಬಿಟ್ಟ., ಅವಳ ಅವತಾರ ನೋಡಿದ ಅಜ್ಜಿ ಭಗವಂತ ಈ ಹುಡ್ಗೀ ದುಂಡಗೆ ಓಡಾಡಿ ಅದನ್ನೂ ಫ್ಯಾಶನ್  ಅಂತ ಹೇಳದೊಂದು ಬಾಕಿ ಇದ್ದು  ಅಂತ ದೊಡ್ಡಕೆ ಗೊಣಗಿದ್ದು  ಕೇಳಿ ತುಟಿಯಂಚಲ್ಲೇ ನಕ್ಕ.ಅಪ್ಪನಿಗೆ ಗೊತ್ತಾಗದಿರಲಿ ಅಂತ ಮೌತ್ ಫ್ರೆಶ್ನೆರ್ ಹಾಕಿಕೊಳ್ಳುವದ ಮರೆಯಲಿಲ್ಲ.





7 comments:

  1. ಥ್ಯಾಂಕ್ ಯು . ಕನ್ನಡ ಬರವಣಿಗೆ ಸ್ವಲ್ಪ ಸುಧಾರಿಸಕ್ಕು.ಮಾಡ್ಕ್ಯತ್ತಿ :)

    ReplyDelete
  2. ಚೆನ್ನಾಗಿದೆ ಶ್ರೀಪಾದಣ್ಣಾ, ಮುಂದುವರೆಯಲಿ ...

    ReplyDelete
  3. Gud Shree... Badalavane Jagattina Niyama...!!!

    ReplyDelete
  4. ನಿಜ... ದುಡ್ಡು ಸಂಸ್ಕೃತಿಯನ್ನು ಬದಲಾಯಿಸ್ತಾ ಇದೆ.. ಮನುಷ್ಯ-ಮನುಷ್ಯರ ನಡುವಣ ಗೌರವವನ್ನ ದುಡ್ಡಿನಿಂದ ಅಲೆಯುವ ಕಾಲ ಎದುರಿಗಿದೆ.. ನಮ್ಮ ಅಪ್ಪ-ಅಮ್ಮಂದಿರು ನಮಗೆ ಕಲಿಸಿದ್ದು ಎಂತಹ ಒಳ್ಳೆಯ ಸಂಸ್ಕಾರ ಎನ್ನುವುದು ಮಹಾನಗರಿಯ ಜನರನ್ನು ನೋಡಿದಾಗ ಅನುಭವವಾಗುತ್ತಿದೆ.. ನಾವು ಮಕ್ಕಳಿಗೆ ನಮ್ಮ ಸಂಸ್ಕಾರವನ್ನೇ ಧಾರೆ ಎರೆಯಲು ಸಾಧ್ಯವೇ ಎಂಬ ಪ್ರಶ್ನೆ ಕಾಡುತ್ತಿದೆ..! ಈ ಕಾಲಕ್ಕೆ ಅಂತಹುದೆಲ್ಲ ಸಹಜವಿರಬಹುದು.. ಆದರೆ ಯಾವುದೂ ಮಿತಿಯಲ್ಲಿರಬೇಕು... ಒಬ್ಬರಿಗೆ ಸರಿ ಎನ್ನಿಸಿದ್ದು ಇನ್ನೊಬ್ಬರಿಗೆ ಸರಿಯಾಗಲೇ ಬೇಕೆಂಬ ಯಾವುದೇ ನಿಯಮವಿಲ್ಲ.. ಆದರೆ ಗೆಳೆಯರ ಜೊತೆ ಹೋದಾಗ ಅವರಂತೆಯೇ ಇರಬೇಕು, ಕುಡಿಯಬೇಕು, ಕುಣಿಯಬೇಕು, ಇಲ್ಲವಾದರೆ ನಾವು ಅವರ ಮುಂದೆ ಸಂನವರಾಗುತ್ತೇವೆ ಎಂದೇಕೆ ಅನಿಸಬೇಕು...?! ಯಾರು ಏನೆಂದರೇನು ನಾನಿರುವುದು ಹೀಗೆ ಎನ್ನುವಂತ ದೃಢ ನಿರ್ಧಾರ ಒಳ್ಳೆಯದು... ಚಟ ತಪ್ಪಲ್ಲದಿದ್ದರೂ ದುಶ್ಚಟ ತಪ್ಪು...! ಪೂರ್ತಿ ಹಾಳಾಗಿ ಜೀವನ ವ್ಯರ್ಥ ಮಾಡಿಕೊಳ್ಳುವುದರ ಬದಲಿಗೆ ಚೆನ್ನಾಗಿ ಬದುಕಿ ತೋರಿಸಿದರೆ ಮಾನ್ಯತೆ ಸಿಗುತ್ತದೆ ಸಮಾಜದಲ್ಲಿ.. ಅಪ್ಪ ಅಮ್ಮಂದಿರು ಕೂಡ ತಕ್ಕ ಮಟ್ಟಿಗೆ ಮಕ್ಕಳೊಡನೆ ಹೊಂದಿಕೊಳ್ಳುವ ಅವಶ್ಯಕತೆಯಿದೆ...! ಹೀಗೆ ಮಾಡಿದರೆ ತಪ್ಪು ಅದರಿಂದ ಹೀಗೆ ಆಗುತ್ತದೆ ಎಂಬುದರ ಬಗ್ಗೆ ಅರಿವು ಮೂಡಿಸಿ ಬೆಳೆಸಿದರೆ ಒಳ್ಳೆಯದು... ಮೊದಲು ಸುಮ್ಮನೆ ದುಡ್ಡಿನ ಮತ್ತಿನಲ್ಲಿ ಬೆಳೆಸಿ ಆಮೇಲೆ ಬೈದು ತಿದ್ದುವುದು ಅಸಾಧ್ಯ...

    ReplyDelete
  5. ಮಿತಿಯಾಗಿರಬೇಕೆಂಬ ನಮ್ಮ ಆಸೆ., ಮತ್ತು ಮಿತಿಯಲ್ಲಿಲ್ಲದ ವಾಸ್ತವ ಎರಡನ್ನೂ ಒಪ್ಕ್ಯಳಕೆ ಅಗ್ತಾ ಇಲ್ಲೇ.ಬೇವು ಬಿತ್ತಿ ಮಾವು ಬೆಳೆಯಲು ಅಗದಿಲ್ಲೇ .ಯಾಕೆ ತಲೆಮಾರಿನಿಂದ ತಲೆಮಾರಿಗೆ prefference ಗಳು ಬದಲಾಗ್ತಾ ಇದ್ದ ?? ಹುಡುಕಾಟ ಮುಂದ್ವರೀತು :)

    ReplyDelete
  6. ಗುಂಡಾಽಽ ಯನ್ ಹೆಸರೂ ತಂದ್ಬಿಟ್ಯಾ!! :P
    ಕಥೆ ಚೆನ್ನಾಗಿದ್ದು.. ವಾಸ್ತವಕ್ಕೆ ಕನ್ನಡಿ :)

    ReplyDelete