Sunday, June 19, 2011

ಜಾಗತೀಕರಣ ಮತ್ತು ಅಪ್ಪಂದಿರ ದಿನ

ಗಣಪತಿಯ ಆಕಾರವೇ ಎಷ್ಟು ವಿಚಿತ್ರ ಅಲ್ಲವಾ..ಒಂದು ಬಗೆಯ ವಿಚಿತ್ರ ಅಕಾರ .ಡೊಳ್ಳು ಹೊಟ್ಟೆ ,ಸೊಂಡಿಲು ,ಇಲಿ ಹಾವು ..ನಾವು ವಿಕಾರ ಮತ್ತು ಅಪೂರ್ಣತೆಯನ್ನ ಪೂಜೆ ಮಾಡ್ತು. ಪೂರ್ಣತೆಯ ಹಂಬಲಕ್ಕಾ??..ಬಿಡು.ಮೊದಲು ಮೃಥಿಕಾ ಪೂಜೆ ಅಂತ ಮಣ್ಣನ್ನೇ ತಂದು ಪೂಜೆ ಮಾಡಿ ಹಾಗೆ ವಿಸರ್ಜನೆ ಮಾಡ್ತಿದ್ದರಂತೆ. ಆ ಮೇಲೆ ಮೆಲ್ಲ ಮೆಲ್ಲನೆ ಆಕರ ಬರೋಕೆ ಶುರುವಾಗಿರಬೇಕು.ಚೌತಿ ಹಬ್ಬ ಅಂದರೆ ದೂರ್ವೆ ಗುಡ್ಡ ಹತ್ತಿ  ಕಿತ್ತು ತರುವ  ಗರಿಕೆ ,ವಿಷ್ಣು ಕಾಂತಿ. ಮನೆಯಲ್ಲಿ ದೇವರ ಮಂಟಪದ ಎದುರು ಇರುವ ಅಟ್ಟಣಿಗೆಯಲ್ಲಿ ಕಟ್ಟುವ ಪಲವುಳಿಗೆ (ಫಲಾವಳಿ)ಆ ಹೊತ್ತಿಗೆ ಬಿಡುವ ಹಣ್ಣು ಹೂವು ,ಕಾಡಿನ ಎಂತೆತದೋ ಹೂವು.ಅವೆನ್ನೆಲ್ಲ ತಂದು ಕಟ್ಟೋದು ರೂಡಿ.ಸುತ್ತ ಮುತ್ತ ಸಿಗುವುದರಲ್ಲೇ ಹಬ್ಬಕ್ಕೆ ಚಂದ ಮಾಡುವ ಸಡಗರ.ಮನೆ ಎದುರು ಮಾವಿನ ಚಂಡೆ ,ಚಕ್ಕುಲಿ ಕಾಯಿಕಡುಬು.,ಸರಿಯಗುವುದ್ದಕ್ಕಿಂತ ಹಾಳೆ ಆಗುವ ಪಂಚಕಜ್ಜಾಯದ  ಹದ.

ಹಬ್ಬಕ್ಕೆ ವಾಸನೆ ಇರ್ತದೆ ಅಂದ್ರೆ ಯಾರದ್ರೂ ನಗಬಹುದು ,ಆದ್ರೆ ನಮಗೆ ಬರಲಿಕ್ಕಿಲ್ಲ.ಚೌತಿ ಹಬ್ಬ ಬರೋ ಹೊತ್ತಿಗೆ ಮಳೆಗಾಲದ ದೊಡ್ಡ ಹೊಡೆತ ಮುಗಿದಿರುತ್ತದೆ.ಹೂ ಬಿಡೋ ಗಿಡ ಎಲ್ಲ ಹೂ ಬಿಟ್ಟು ಜೋತಾಡ ತೊಡಗುತ್ತಿರುತ್ತವೆ.ಕೆಸರು ಥಂಡಿ ಎಲ್ಲ ಒಣಗಿದ್ದರು ತೇವ ಏನೂ ಹೋಗಿರೋದಿಲ್ಲ.ನಮ್ಮ ಮನೆಗಳಲ್ಲಿ ಚಕ್ಕುಲಿಯ ಪರಿಮಳ ಬರೋದು ಚೌತಿಲಿ ಮಾತ್ರ ಅಲ್ವ.ಚೌತಿ ಹಬ್ಬದ ಹಾಡನ್ನ ಬೇರೆ ಯಾವಾಗಲು ಹೇಳಲ್ಲ.ಜೋರು ಜಂಗಟೆ  ಆಗೀಗ ಬೀಳುವ ಹನಿ ಹನಿ ಮಳೆ.ಎಲ್ಲ ಸೇರಿ ಒಂದು ಆವರಣ ಸೃಷ್ಟಿಯಾಗಿರತ್ತೆ.ಚೌತಿ ಹಬ್ಬ ಅಂದ್ರೆ ಇದೆಲ್ಲ ನೆನಪಿಗೆ ಬರತ್ತಲ್ವಾ.ದೀವರು ಗೌರಿ ಬಿಡುವ ವರೆಗಿನ ಎಲ್ಲ ಚಿತ್ರಣಗಳೂ.

ಬರೀ ಚೌತಿಗಲ್ಲ ,.ನವರಾತ್ರಿಗೆ ದೊಡ್ದಬ್ಬಕ್ಕೆ.,ಈಗಲೂ -ಮಟ ಮಟ ಮಧ್ಯಾನ್ನದಲ್ಲೂ ಕಣ್ಮುಚ್ಚಿ ಕುಳಿತರೆ ಆ ಘಮ ಮೂಗಿಗೆ ಬಡಿಯತ್ತೆ. ಒಳಗೆಲ್ಲೋ ಇಳಿದು ನಡುಮನೆಯ ಮಂದ ಕತ್ತಲು ,ವಳ್ಳೆಣ್ಣೆ   ಕಂಪು ಗಂಟೆಯ ಶಬ್ದ ತುಂಬಿಕೊಳ್ಳುತ್ತದೆ. ಶ್ರೀಪಾದು ಈ ವಾಸನೆಯನ್ನ ಹಿಡಕೊಂಡ್ರೆ ಮಾತ್ರ  ನಾವೆಲ್ಲ ಹೇಳುವ "ಜಾಗತೀಕರಣ" ವನ್ನ ಅರ್ಥ ಮಾಡಿಕೊಳ್ಳಲು ಸಾಧ್ಯ.ನೋಡು ನಾನು ನೀನು ಈಗ ದೂರ್ವೆ ಕೊಯ್ಯೋದಿಲ್ಲ.ಫಲವುಳಿಗೆ ಬಹುಷಃ ದೊಡ್ಡಪ್ಪ ಶಾಸ್ತ್ರಕ್ಕೆ ಅಂತ ಕಡ್ತಾರೆ.ಅಮ್ಮ ಒಬ್ಳೇ ಚಕ್ಲಿ ಮಾಡಬೇಕಲ್ಲ ಅಂತ ಮಾಡೋದು. ಈಗಿನ ಮಕ್ಳು ನಾನು ಜನ್ಗಟೆ ಹೊಡಿತಿ ,ನಂಗೆ ಜನ್ಗಟೆ ಬೇಕು ಅಂತ ಅತ್ತು ರಂಪ ಮಾಡೋದಿಲ್ಲ.ಗರಿಕೆ ಹುಲ್ಲು ಬೇಕೇ ಬೇಕು ಅಂತ ಇಲ್ಲ. ಗಣಪತಿ ಸಾಗರದಿಂದ ಬರತ್ತೆ ಮತ್ತು ನಾನು ನೀನು ಎಲ್ಲ "ಗಣೇಶ ಚತುರ್ಥಿ"ಗೆ ಅಂತ ಕೊಡುವ ರಜಕ್ಕೆ ಊರಿಗೆ ಬರ್ತೇವೆ.ಹಬ್ಬದ ದಿನ ನಮಗೆ ಮೀಟಿಂಗ್ ಇದ್ರೆ ಮೀಟಿಂಗೆ ಮುಖ್ಯ. ಹಬ್ಬ ಏನೂ ಮುಂದಿನ ವರ್ಶಾನೂ ಬರತ್ತೆ ಅಲ್ವ.

"ಅಪ್ಪಂದಿರ ದಿನ " ಹೆಸರು ಕೇಳಿದ್ರೆ ಗೊತಾಗತ್ತೆ ಅದು ನಮ್ಮ ಹಬ್ಬ ಅಲ್ಲ ಅಂತ,.ಪಿತೃ ದೇವೋ ಭವ ಅಂತ ದಿನಾ ಮಂತ್ರದಲ್ಲಿ ಹೇಳ್ತಿವಿ ನಾವು.ಪ್ರೀತಿಸುದಕ್ಕೆ .,ಅದನ್ನ ವ್ಯಕ್ತ ಪಡಿಸುವುದಕ್ಕೆ ಇಂತದ್ದೆ ದಿನ ಹೇಳಿ ನಾವು ಮಾಡಿತ್ತುಕೊಂಡಿದ್ದಲ್ಲ.ಅಪ್ಪನ ಪ್ರೀತಿಯನ್ನ ಕೇವಲ ಒಂದು ದಿನಕ್ಕೆ ಫಾರ್ಮಾಲಿಟಿ ಮಾಡಿಕೊಂಡಿಲ್ಲ ನಾವು.ಬಹುಷಃ ನಾವು ದಿನವೂ ಅಪ್ಪನ ಕಾಲಿಗೆ ನಮಸ್ಕಾರ ಮಾಡಿಯೇ ತೀರ್ಥ ತಗೊಳ್ತಿವಿ.ಅಲ್ವಾ

ಇದಕ್ಕೆ ಏನಂತ ಹೆಸರಿಡೋಣ .ನಮ್ಮ ಮನೆಯ ಚೌತಿ ಹಬ್ಬ ಅರಿವಿಗೆ ಬರದಂತೆ ನಿಸ್ತೇಜವಾಗೋದು.ಮಾರಿಜಾತ್ರೆ ಮೂಡ ನಂಬಿಕೆ ಅನ್ಸೋದು.fathers day ,mothers day  feb-14 ನಮ್ಮ ಮನೆಯಂಗಳಕ್ಕೆ ಮನೆಯೊಳಗೇ ಬಂದು ಕೂರೋದು.ಹೊಗೊಪ್ಳಲ್ಲಿ ಇನ್ನೊಂದು ಹತ್ತು ವರ್ಷಕ್ಕೆ  ಜನವೇ ಇಲ್ಲದಂತಾಗುವುದು.ಇನ್ನೊಂದು ಇಪ್ಪತ್ತು ವರ್ಷಕ್ಕೆ  ಜನ ಯಾರೂ ಇರಲ್ಲ ಹೇಳಿ ವಾಪಸ್ಸು ಹೋಗ್ತಾರೆ ಅಂತ ದೀವರು ಗೌರಿ ಹಬ್ಬದ ದಿನಾನೆ ಗೌರಿನ ಹೊಳೆಗೆ ಬಿಟ್ಟು ಬರುವಂತಾಗುವುದು.??

ಇದ್ಯಾವ್ದೂ ಅರ್ಥವಾಗದೆ ದೇಶದ ಬಗ್ಗೆ ,ಜಾಗತೀಕರಣದ ಬಗ್ಗೆ ,ಪ್ರಗತಿಯ ಬಗ್ಗೆ ,ನಮಗೆ ಬೇಕಿರುವ ಪ್ರಗತಿಯ ಬಗ್ಗೆ  ಮಾತಾಡಿ ಪ್ರಯೋಜನವಿಲ್ಲವೇನೂ???

(ನನಗೆ ಬಂದ ಒಂದು ಪತ್ರ, ಅಪ್ಪಂದಿರ  ದಿನದ ಭರಾಟೆಯ ಹಿನ್ನಲೆಯಲ್ಲಿ ಹಾಕ್ತ ಇದ್ದಿ )

3 comments:

  1. ಚೆನ್ನಾಗಿದ್ದು ಅಪ್ಪಚ್ಚಿ.. :)

    ReplyDelete
  2. ಕಟು ಸತ್ಯ ಶ್ರೀಪಾದು.. ಹಬ್ಬಗಳೆಲ್ಲಾ ತನ್ನ ಕಳೆಯನ್ನ ಕಳ್ಕತಾ ಇದ್ದು.. ಮಾಡಕ್ಕನ ಅನ್ನೋದ್ಕೆ ಮಾಡ್ತ ಅಷ್ಟೇ.. ಎಲ್ಲಾ formalities ಆಗೋಯ್ದು... ನಮ್ಮೂರಗೆ ದೀಪಾವಳಿ ದಿನ ಎಲ್ಲರೂ ( ಊರು ಬಿಟ್ಟು ಪೇಟೆ ಸೇರಿದವರು ) ಊರಗೆ ಸೇರ್ತ್ನ್ಯ ಅಷ್ಟೇ...... :(

    ReplyDelete
  3. ಯಾರನ್ನ ಹೊಣೆ ಮಾಡನ ಪ್ರವೀಣಣ್ಣ??

    ಕಿರಣ ಥ್ಯಾಂಕ್ ಯು

    ReplyDelete